ಭಕ್ತಿ ಭಾವದಿಂದ ನಡೆದ ವರ್ಧಂತಿ ಮಹೋತ್ಸವ 

ಹಿರಿಯೂರು.ಏ. 24 ;  ಹಿರಿಯೂರು ನಗರದ ದಕ್ಷಿಣ ಕಾಶಿ ಶ್ರೀ ತೇರುಮಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿರುವ ಸುಪ್ರಸಿದ್ಧ ಶ್ರೀ ಕಾಳಿಕಾಂಬ ಮಾತೆಯ ವರ್ಧಂತಿ ಮಹೋತ್ಸವ ಹಾಗೂ ಜಾತ್ರಾ  ಮಹೋತ್ಸವ ಭಕ್ತಿ ಭಾವದಿಂದ ನೆರವೇರಿತು. ಇದರ ಅಂಗವಾಗಿ ಗಂಗಾ ಪೂಜೆ ಗಣಪತಿ ಪೂಜೆ ಮೆರವಣಿಗೆ ಹಾಗೂ ಲೋಕ ಕಲ್ಯಾಣಾರ್ಥವಾಗಿ  ವಿಶೇಷ ಪೂಜೆ ಮಹಾ ಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಹಾಗೂ ಮಧ್ಯಾಹ್ನದಿಂದ ರಾತ್ರಿಯವರೆಗೂ ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ನಗರದ ಅನೇಕ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತೆಯ ದರ್ಶನ ಭಾಗ್ಯವನ್ನು ಪಡೆದರು. ದೇವಸ್ಥಾನಕ್ಕೆ ಆಗಮಿಸಿದ್ದ ಸುಮಂಗಲೆಯರಿಗೆ ಉಡಿ ತುಂಬಿ ಹರಿಸಿನ ಕುಂಕುಮ ಬಳೆ ನೀಡಲಾಯಿತು.