ಬೀದರ್ ತಾಪಂ ಕಚೇರಿಯಲ್ಲಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ

ಬೀದರ್: ಎ.15:ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜಯಂತಿಯನ್ನು ಬೀದರ್ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಡಾ.ಬಿ.ಆರ.ಅಂಬೇಡ್ಕರ್ ಅವರ 132ನೇ ಜಯಂತಿಯನ್ನು ಆಚರಿಸಲಾಯಿತು.
ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಾಣಿಕ ರಾವ್ ಪಾಟೀಲ್ ಪಾಟೀಲ್ ಅವರು ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ನರೇಗಾ ಸಹಾಯಕ ನಿರ್ದೇಶಕರಾದ ಲಕ್ಷ್ಮೀ ಬಿರಾದಾರ್, ಪಂಚಾಯತ್ ರಾಜ್ ವಿಭಾಗದ ಸಹಾಯಕ ನಿರ್ದೇಶಕರಾದ ಸಂಜಯ ಕುಮಾರ್, ತಾಪಂ ವ್ಯವಸ್ಥಾಪಕರಾದ ಮುನಫ್ ಪಟೇಲ್, ಎಡಿಪಿಐ ಸಹಾಯಕ ನಿರ್ದೇಶಕಿ ಗೀತಾ ಗಡ್ಡಿ ,ಬೀದರ್ ತಾ.ಪಂ. ನ ಪ್ರಥಮ ದರ್ಜೆ ಸಹಾಯಕರಾದ ಬಸೀರ್ , ಹನುಮಂತ್ ಚಿದ್ರಿ ಆಡಳಿತ ಸಹಾಯಕರಾದ ಯೋಗಿನಿ ಲದ್ದೆ,ತಾಂತ್ರಿಕ ಸಂಯೋಜಕರು ಅಮರ್ ಬಿರಾದಾರ್, ತಾಲೂಕು ಸಂಯೋಜಕರು ಸತ್ಯಜೀತ್ ನೀಡೋದಾಕರ್, ಪ್ರಣಿತಾ, ಅಭಿಲಾಶ್, ಸುನೀತಾ ರೆಡ್ಡಿ, ಸಂಜೀವ್ ಹಳ್ಳಿ, ಸಂಗೀತ ಸ್ವಾಮಿ ಹಾಗೂ ಸಿಬ್ಬಂದಿಗಳಿದ್ದರು.