
ಕಲಬುರಗಿ:ಮೇ.17: ಅಳಂದ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲರು ನಾಲ್ಕು ದಶಕಗಳ ಕಾಲ ನಿರಂತರ ಹೋರಾಟದ ಮೂಲಕ ರಾಜಕಾರಣ ಮಾಡುತ್ತಾ ಅನೇಕ ಏಳು ಬೀಳು ಕಂಡರೂ ಸಮಾಜಮುಖಿಯಾಗಿ ಎಲ್ಲಾ ರಂಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಎಂದು ಆಳಂದ ಮಾದಿಗ ಸಮಾಜದ ಯುವ ಮುಖಂಡ ರಾಹುಲ್ ಮೇತ್ರೆ ಹೇಳಿದರು.
ರೈತಪರ, ಮಹಿಳಾಪರ, ದಲಿತಪರ, ಕಾರ್ಮಿಕಪರ ಹೋರಾಟ ಮಾಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ಸಿಕ್ಕಂತ ಕಡಿಮೆ ಅವಧಿಯಲ್ಲಿ ಶಾಶ್ವತ ಕಾಮಗಾರಿ ಮಾಡಿದ್ದಾರೆ. ಪಾರದರ್ಶಕ ಆಡಳಿತ ನೀಡುವದರ ಜೊತೆಗೆ ಸರ್ವ ಧರ್ಮಿಯರಿಗೆ ಸಮಾನ ಅವಕಾಶ ಕಲ್ಪಿಸಿದ್ದಾರೆ. ಹಿಂದೂ ಮುಸ್ಲಿಂ ಭಾವೈಕ್ಯತೆ ಬೆಸೆಯುವದರ ಜೊತೆಗೆ ಧರ್ಮ ನಿರಾಪೇಕ್ಷ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಬಸವಣ್ಣ, ಅಂಬೇಡ್ಕರ್, ಮಹಾತ್ಮಾ ಗಾಂಧಿ, ಜಯ ಪ್ರಕಾಶ್ ನಾರಾಯಣ, ರಾಮಮನೋಹರ್ ಲೋಹಿಯಾ, ನಾರಾಯಣಗುರು, ಪೆರಿಯಾರ್ ರಾಮಸ್ವಾಮಿ, ಕನಕದಾಸ ಮುಂತಾದ ದಾರ್ಶನಿಕರ ಆದರ್ಶ ಅಳವಡಿಸಿಕೊಂಡು ಸಮಾಜ ಸೇವೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಶಿರಪುರ ಮಾದರಿಯಲ್ಲಿ ನೀರಾವರಿ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಅಂತರ್ ಜಲ ಹೆಚ್ಚಿಸುವಲ್ಲಿ ಯಶಸ್ವೀ ಆಗಿದ್ದಾರೆ. ಶಿಕ್ಷಣ, ಅರೋಗ್ಯ, ಉದ್ಯೋಗ, ಸಂಸ್ಕøತಿ, ನಿರಾವರಿ,ಸಾರಿಗೆ, ಮುಂತಾದ ಕ್ಷೇತ್ರದಲ್ಲಿ ಗಣನಿಯ ಸಾಧನೆ ಮಾಡಿದ್ದಾರೆ ಲಿಂಗಾಯತ ಸಮಾಜದ ಹಿರಿಯ ಮುತ್ಸದ್ದಿ ರಾಜಕಾರಣಿಯಾಗಿದ್ದಾರೆ. ಆಳಂದ ವಿಧಾನಸಭಾ ಕ್ಷೆತ್ರ ಗಡಿ ಪ್ರದೇಶವಾಗಿದ್ದು ಈ ಕ್ಷೆತ್ರದಿಂದ ಇಲ್ಲಿಯವರೆಗೆ ಯಾರು ಮಂತ್ರಿ ಆಗಿರುವದಿಲ್ಲ. ಬಿ ಆರ್ ಪಾಟೀಲರ ಕೊನೆಯ ಅವಧಿಯoತ ಘೋಷಿಸಿಕೊಂಡಿದ್ದಾರೆ.
ಕಾರಣ ಪಾಟೀಲ ಸೇವೆಯನ್ನು ಗಣನೆಗೆ ತೆಗೆದುಕೊಂಡು ಮತ್ತು ಮುಂದೆ ಅವರ ಅನುಭವ ಆದರಿಸಿ ಅವರಿಗೆ ಮಂತ್ರಿ ಸ್ಥಾನ ಕೊಟ್ಟರೆ ಖಂಡಿತ ಅವರು ರಾಜ್ಯಕ್ಕೆ ಮಾದರಿ ಆಗುವ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಆದರಿಂದ ಅವರಿಗೆ ಮಂತ್ರಿ ಸ್ಥಾನ ನೀಡಲೇ ಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.