
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.14: ನಗರದಲ್ಲಿನ ಬಿಡಾಡಿ ದನಗಳ ನಿಯಂತ್ರಣಕ್ಕೆ ಮಹಾನಗರ ಪಾಲಿಕೆಯ ಅಧಿಕಾರಿಗಳು ಗಮನಹರಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಆರ್.ವೆಂಕಟರೆಡ್ಡಿ ಮತ್ತು ಶಂಕರ್ ಅವರು ಕೋರಿದ್ದಾರೆ.
ಪಾಲಿಕೆಗೆ ಈ ಬಗ್ಗೆ ಕಳೆದ 2 ವರ್ಷ ದಿಂದ ಹಲವಾರು ದೂರುಗಳು ಕೊಟ್ಟಿದೆ. ಲೋಕಾಯುಕ್ತ ಅಧಿಕಾರಿಗಳು ಕೂಡಾ ದೂರನ್ನು ಕೊಟ್ಟಿದೆ.
ಆದರೂ ಇವತ್ತಿನ ವರೆಗೆ ಕ್ರಮ ತಗೊಂಡಿಲ್ಲ. ಕಾರಣ ಏನು ಅನ್ನೋದು ತಿಳಿದಿಲ್ಲ ಎಂಬುದು ಅವರ ಪ್ರಶ್ನೆಯಾಗಿದೆ.