
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.7 :- ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ನಿಂಬಳಗೆರೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳ ಪ್ರಗತಿ ರಥದ ಯಾತ್ರೆಗೆ ಬಿಜೆಪಿ ಯುವ ಜಿಲ್ಲಾ ಪ್ರಧಾನಕಾರ್ಯದರ್ಶಿ ಹನುಮಂತಪ್ಪ ಶಿಂದೆ ಚಾಲನೆ ನೀಡಿದರು.
ಈ ರಥಯಾತ್ರೆಯ ಕಾರ್ಯಕ್ರಮವು ಬಿಜೆಪಿ ತಾಲೂಕು ಯುವ ಮೋರ್ಚಾ ಅಧ್ಯಕ್ಷರಾದ ಗುಳಿಗಿ ವೀರೇಶ್ ಅವರ ನೇತೃತ್ವದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರ್ಯಪಾಪಣ್ಣ, ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ವೀರಭದ್ರಪ್ಪ ,ಭರತ್ ರಾಮ್ , ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಸಚಿನ್ ಅಜೇಯ ಕುಮಾರ್ , ಮಹಿಳಾ ಮೋರ್ಚಾ ಅಧ್ಯಕ್ಷರಾದ ಪವಿತ್ರ , ಎ ಪಿ ಎಂ ಸಿ ಉಪಾಧ್ಯಕ್ಷರಾದ ಜೆ ಸಿದ್ದೇಶ್, ಯುವ ಮೋರ್ಚಾ ಪಾಧಧಿಕಾರಿಗಳು ಹಾಗೂ ಗ್ರಾಮದ ಮುಖಂಡರಾದ ರಾಜೇಂದ್ರ ಗೌಡ, ರಮೇಶ್ ,ಗಾಣಗಟ್ಟೆ ಮಹಾಂತೇಶ್ , ಇನ್ನು ಮುಂತಾದ ಮುಖಂಡರು ಉಪಸ್ಥಿತರಿದ್ದರು.