ಬಿಜೆಪಿ ಸಂಸ್ಥಾಪನಾ ದಿನಾಚರಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.06:  ನಗರದ  ವಾಜಪೇಯಿ ಬಡವಾಣೆಯಲ್ಲಿನ  ನೂತನ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಇಂದು ಬಿಜೆಪಿ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯ್ತು.
ಈ ಸಂದರ್ಭದಲ್ಲಿ ಭಾರತ ಮಾತೆಗೆ ಪೂಜೆ ಮಾಡಿ ಪಕ್ಷದ ಧ್ವಜಾರೋಹಣ ಮಾಡಲಾಯ್ತು ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಅಡಿದ  ಭಾಷಣ ನೇರಪ್ರಸಾರದಲ್ಲಿ ವಿಕ್ಷಿಸಿಲಾಯಿತು.
ಪಕ್ಷದ ಜಿಲ್ಲಾಧ್ಯಕ್ಷರ ಗೋನಾಳು ಮುರಹರಗೌಡ, ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗುರುಲಿಂಗನಗೌಡ, ಜಿಲ್ಲಾ ಉಪಾಧ್ಯಕ್ಷ ವೀರಶೇಖರ ರೆಡ್ಡಿ,  ಉಪಾಧ್ಯಕ್ಷರಾದ ಗಾಳಿ ಶಂಕರಪ್ಪ, ಶ್ರೀನಿವಾಸ್ ಮೋತ್ಕರ್, ಕಾರ್ಯದರ್ಶಿ ಸುಮಾ ರೆಡ್ಡಿ, ಕಾರ್ಯಾಲಯ ಕಾರ್ಯದರ್ಶಿ ಬಿ ರಾಮಕೃಷ್ಣ, ಜಿಲ್ಲಾ ಖಜಾಂಚಿ ಶಂಭು ಪ್ರಸಾದ್,  ಒಬಿಸಿ ಮೊರ್ಚಾದ ಜಿಲ್ಲಾಧ್ಯಕ್ಷ ಗಾದಿಲಿಂಗನಗೌಡ, ಪುಷ್ಪಾ,   ಜಿಲ್ಲಾ ಮಾಧ್ಯಮ ವಿಭಾಗದ ಸಹ ಸಂಚಾಲಕ ರಾಜಿವ್ ತೋಗರಿ ,   ಮೈನಾರಿಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮೆಹಬೂಬ್ ಬಾಷ, ಬಿಜೆಪಿ ಮುಖಂಡರಾದ ಶಿವಾನಂದ, ಪ್ರತಾಪ್ ರೆಡ್ಡಿ ಯವರು,ರವಿ ತೇಜ ಮೊದಲಾದವರು ಭಾಗವಹಿಸಿದ್ದರು