
ದಾವಣಗೆರೆ.ಮೇ.೨: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗರಾಜ್ ಲೋಕಿಕೆರೆ ಅವರ ಪತ್ನಿ ಶ್ರೀಮತಿ ಲತಾ ನಾಗರಾಜ್ ಲೋಕಿಕೆರೆ ಅವರು ಪತಿ ಪರ ಬಿರುಸಿನ ಮತ ಪ್ರಚಾರ ನಡೆಸಿದರು.ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆವರಗೊಳ್ಳ, ರೇಣುಕಾ ನಗರ, ಕಟ್ಟೆಗುಂಡಿ ಕ್ಯಾಂಪ್ ಭಾಗಗಳಲ್ಲಿ ಬಿಜೆಪಿ ಮಹಿಳಾ ಮುಖಂಡರು, ಕಾರ್ಯಕರ್ತೆಯರ ಜೊತೆಗೂಡಿ ಮತದಾರರ ಪ್ರತಿ ಮನೆಗಳಿಗೆ ಭೇಟಿ ನೀಡಿ ಮನೆ ಮನೆ ಸಂಪರ್ಕ ಜೊತೆಗೆ ಮತದಾರರ ಮನೆಗಳಲ್ಲಿ ಸಭೆ ನಡೆಸಿ, ಪತಿ ನಾಗರಾಜ್ ಲೋಕಿಕೆರೆ ಅವರನ್ನು ಬೆಂಬಲಿಸುವಂತೆ ಮತಯಾಚಿಸಿದರು.ಈ ವೇಳೆ ಹೆಚ್.ಸಿ. ಜಯಮ್ಮ, ವೀಣಾ ನಂಜಪ್ಪ, ಗಾಯತ್ರಿ, ರೇಖಾ ಸುರೇಶ್, ತನು ನಂದೀಶ್, ರಾಜೇಶ್ವರಿ, ಮೇಘನಾ, ದಾಕ್ಷಾಯಿಣಿ, ಮಂಜುಳಾ, ಯಶೋಧ, ಶ್ರೀದೇವಿ, ರಶ್ಮಿ ಪ್ರದೀಪ್, ಪ್ರೀತಿ ಜಗದೀಶ್, ಶ್ವೇತಾ ರಾಘವೇಂದ್ರ ಪಲ್ಗುಣಿ, ಸಾಕಮ್ಮ, ದೇವಕ್ಕ, ಜ್ಯೋತಿ, ಗಾಯತ್ರಿ, ರೇಖಾ ಸುರೇಶ, ಉಷಾ ಸೇರಿದಂತೆ ಪಕ್ಷದ ಕಾರ್ಯಕರ್ತರು ಲತಾ ನಾಗರಾಜ್ ಲೋಕಿಕೆರೆ ಅವರಿಗೆ ಸಾಥ್ ನೀಡಿದ್ದರು.