ಚಾಮರಾಜನಗರ, ಜೂ.07:- ಬಿಜೆಪಿಯವರ ಸ್ಥಿತಿ ತಾನು ಕಳ್ಳ ಪರರನ್ನು ನಂಬ ಎಂಬಂತಾಗಿದೆಎಂದು ಬಿಜೆಪಿಗರ ಪ್ರತಿಭಟನೆ ವಿರುದ್ಧ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಕಿಡಿಕಾರಿದರು.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಶಾಸಕ ಗಣೇಶ್ ಪ್ರಸಾದ್ಆಯೋಜನೆ ಮಾಡಿದ್ದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿಯತೀಂದ್ರ ಸಿದ್ದರಾಮಯ್ಯ ಪಾಲ್ಗೊಂಡು ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ವಿರುದ್ಧತೀವ್ರ ವಾಗ್ಧಾಳಿ ನಡೆಸಿದ ಅವರು, ಅವರಂತೆ (ಬಿಜೆಪಿಯವರಂತೆ) ಸುಳ್ಳು ಭರವಸೆಗಳನ್ನು ಕಾಂಗ್ರೆಸ್ಕೊಟ್ಟಿದೆಎಂದುಕೊಂಡಿದ್ದರು. ಆದರೆಎಲ್ಲಾ 5 ಗ್ಯಾರಂಟಿಗಳನ್ನು ಕಾಂಗ್ರೆಸ್ ಈಡೇರಿಸಿದೆ ಎಂದುಟಾಂಗ್ ನೀಡಿದರು.
ಬಿಜೆಪಿ ಸರ್ಕಾರ 600 ಭರವಸೆಕೊಟ್ಟಿತ್ತುಆದರೆಯಾವುದನ್ನು ಈಡೇರಿಸಿರಲಿಲ್ಲ, ಪ್ರಧಾನಿ ನರೇಂದ್ರ ಮೋದಿ ಅವರುಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿಲ್ಲ, ಅದರ ಬಗ್ಗೆ ಬಿಜೆಪಿಗರು ಮಾತನಾಡುತ್ತಿಲ್ಲ. ನಾವು ಅಧಿಕಾರಕ್ಕೆ ಬಂದುಇನ್ನೂ 1 ತಿಂಗಳು ಕೂಡ ಕಳೆದಿಲ್ಲ. ಇದೀಗ ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಿದ್ದಾರೆಎಂದುಯತೀಂದ್ರ ಬಿಜೆಪಿಗರನ್ನು ಲೇವಡಿ ಮಾಡಿದರು.
ಈ ಬಾರಿಯಚುನಾವಣೆಯಲ್ಲಿ ನಮ್ಮಕಡೆಧರ್ಮಇತ್ತು, ಅವರಕಡೆಅಧರ್ಮಇತ್ತು. ನಮ್ಮದು ಪ್ರಾಮಾಣಿಕ ಸೇವೆ ಅವರದು 40% ಭ್ರμÁ್ಟಚಾರ, ನಮ್ಮದು ಬಡವರ ಪರ ಸರ್ಕಾರಅವರದು ಶ್ರೀಮಂತರ ಪರ ಒಲವು. ಈ ಎಲ್ಲಾ ಅಂಶಗಳನ್ನು ಮತದಾರರಿಗೆ ತಿಳಿಸಿದೆವು, ಜನರು ನಮಗೆ ಆಶೀರ್ವಾದ ಮಾಡಿದರು. ಈಗ ಕಾರ್ಯಕರ್ತರ ಮೇಲೆ ಹೆಚ್ಚು ಜವಬ್ದಾರಿಇದ್ದು ಲೋಕಾಸಭಾಚುನಾವಣೆ ಒಳಗೆ ಎಲ್ಲಾಗ್ಯಾರಂಟಿಯೋಜನೆಜನರಿಗೆತಲುಪಿಸಬೇಕು, ಕಾಂಗ್ರೆಸ್ ಸಾಧನೆ ಬಗ್ಗೆ ಹೇಳಬೇಕು ಎಂದರು.
ಬಿಜೆಪಿ ಭಾವನಾತ್ಮಕ ವಿಷಯಗಳನ್ನು ಹಿಡಿದು ಜನರನ್ನು ಕೆರಳಿಸುತ್ತಿದ್ದರು. ಈಗ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಪ್ರಾಮಾಣಿಕ ಸೇವೆ ಸಲ್ಲಿಸುತ್ತೇವೆ ಎಂದು ಇದೇ ವೇಳೆ ಮಾಜಿ ಶಾಸಕ ಯಂತೀಂದ್ರ ಭರವಸೆ ನೀಡಿದರು.