ಬಿಜೆಪಿಗೆ ಹೂಕೊಟ್ಟು ಜೆಡಿಎಸ್ ಪಾಲಾದ ಮಾಜಿ ಜಿ.ಪಂ.ಸದಸ್ಯ

ಗಬ್ಬೂರು,ಮಾ.೦೧- ಕೆಲ ದಿನಗಳಿಂದ ಬಿಜೆಪಿ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಗಬ್ಬೂರು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಶರಬಣ್ಣ ಸಾಹುಕಾರ್ ಚಿಕ್ಕ ಕೂಡ್ಲಿಗಿ ಶುಕ್ರವಾರ ಗಬ್ಬೂರಿನ ನಿವಾಸದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಕರೇಮ್ಮ ನಾಯಕಿ ಮತ್ತು ತಾಲೂಕು ಅಧ್ಯಕ್ಷ ಬುಡ್ಡನಗೌಡ ಪಾಟೀಲ್ ನೇತೃತ್ವದಲ್ಲಿ ಅಧಿಕೃತವಾಗಿ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದಾರೆ.
ದೇವದುರ್ಗ ವಿಧಾನಸಭೆಯ ಜೆಡಿಎಸ್ ಅಭ್ಯರ್ಥಿಯಾದ ಜಿ.ಕರೇಮ್ಮ ನಾಯಕಿ ಮತ್ತು ಜೆಡಿಎಸ್ ತಾಲೂಕು ಅಧ್ಯಕ್ಷರಾದ ಬುಡ್ಡನಗೌಡ ಜಾಗಟಗಲ್ ಅವರ ಸಮ್ಮುಖದಲ್ಲಿ ನಡೆದ ಗಬ್ಬೂರಿನಲ್ಲಿ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿಗೆ ಹೂವು ಕೊಟ್ಟು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಶಾಸಕ ಶಿವನಗೌಡ ನಾಯಕರ ಸ್ವಾರ್ಥಕ್ಕೆ ಗಬ್ಬೂರು ತಾಲೂಕು ಮಾಡದೇ,ಅರಿಕೇರಾ ಗ್ರಾಮ ತಾಲೂಕು ಮಾಡಿದ್ದಕ್ಕೆ ಮತ್ತು ದುರಾಡಳಿತಕ್ಕೆ ಬೇಸತ್ತು ಅವರ ಹಿಂಬಾಲಕರಿಂದ ನಾನು ಬಹಳ ತೊಂದರೆಗಳನ್ನು ಅನುಭವಿಸಿದ್ದೇನೆ ಆದ ಕಾರಣ ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ಗಬ್ಬೂರು ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಶರಬಣ್ಣ ಸಾಹುಕಾರ್ ಅವರ ಮಾತಾಗಿದೆ.