ಬಿಎಲ್ ಸಂತೋಷ್ ಚೇಲಾಗಳ ಸಂಘದ ಅಧ್ಯಕ್ಷ ಪ್ರತಾಪಸಿಂಹ

ಮೈಸೂರು: ಜೂ.21:- ಪ್ರತಾಪ ಸಿಂಹ ಅವರು ಬಿ.ಎಲ್.ಸಂತೋಷ್ ಚೇಲಾಗಳ ಸಂಘದ ಅಧ್ಯಕ್ಷ. ಸಿ.ಟಿ. ರವಿ ಕಾರ್ಯದರ್ಶಿ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಆ ಪಕ್ಷದ ನಾಲ್ವರು ಪೈಪೆÇ?ಟಿ ನಡೆಸುತ್ತಿದ್ದು, ಹೈಕಮಾಂಡ್ ಅನ್ನು ಮೆಚ್ಚಿಸಲು ಹೀಗೆ ಬಾಯಿ ಬಡಿದುಕೊಳ್ಳುತ್ತಿದ್ದಾರೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಎಂ.ಬಿ ಪಾಟೀಲ್ ಮತ್ತು ಎಚ್.ಸಿ.ಮಹದೇವಪ್ಪ ಅವರನ್ನ ಸಿಎಂ ಸಿದ್ದರಾಮಯ್ಯ ಅವರ ಚೇಲಾಗಳು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಪ್ರತಾಪಸಿಂಹ ಅವರು, ನಿಮ್ಮ ಯೋಗ್ಯತೆಗೆ ನಿಮ್ಮ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದಿರೋದೆ ಒಂದು ಕ್ಷೇತ್ರ ಮಾತ್ರ. ಜನರಿಗೆ ನಿಮ್ಮ ಬಗ್ಗೆ ಈಗಾಗಲೇ ಗೊತ್ತಾಗಿದೆ. ಮುಂದಿನ ಚುನಾವಣೆಯಲ್ಲಿ ಜನ ನಿಮಗೆ ತಕ್ಕ ಉತ್ತರ ಕೊಡುತ್ತಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.
ಸಂಸತ್ತಿನಲ್ಲಿ ಎಷ್ಷು ದಿನ ಮಾತನಾಡಿದ್ದೀರಾ? ಎಷ್ಟು ದಿನ ರಾಜ್ಯದ ಸಮಸ್ಯೆ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದೀರಿ? ನೀವು ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಿದರೆ ದೊಡ್ಡ ಮನುಷ್ಯನಾಗುತ್ತೇನೆ ಅಂದು ಕೊಂಡಿದ್ದೀರಾ? ನಿಮ್ಮ ಬಂಡವಾಳ ನಮಗೂ ಗೊತ್ತು. ನೀವು ಮಾಡುತ್ತಿರುವ ಅಕ್ರಮಗಳು ನಮಗೂ ಗೊತ್ತು,ಮೈಸೂರು ದಶಪಥ ರಸ್ತೆ ಕಾಮಗಾರಿಯಲ್ಲಿ ಎಷ್ಟು ಪಸೆರ್‍ಂಟೇಜ್ ಕಮಿಷನ್ ತಗೊಂಡಿದ್ದೀರಿ ಅನ್ನೋದು ಗೊತ್ತಿದೆ. ಕೊಡಗಿನಲ್ಲಿ ಎಷ್ಟು ಹೂಡಿಕೆ ಮಾಡಿದ್ದೀರಿ ಅಂತಲೂ ಗೊತ್ತಿದೆ ಎಂದು ಕಿಡಿಕಾರಿದರು.
ಒಕ್ಕಲಿಗರ ಮೇಲೆ ಇದ್ದಕ್ಕಿದ್ದ ಹಾಗೆ ಯಾಕೆ ಒಲವು ಬಂದಿದೆ? ಡಿ.ಕೆ.ಶಿವಕುಮಾರ್ ಬಗ್ಗೆ ಪ್ರೀತಿ ವಿಶ್ವಾಸ ಇದ್ದರೆ ಯಾಕೆ ಜೈಲಿಗೆ ಹಾಕಿಸಿದ್ರಿಘಿ?ಒಕ್ಕಲಿಗರ ಮೇಲೆದ್ದ ಅಭಿಮಾನ ಆಗ ಎಲ್ಲಿಗೆ ಹೋಗಿತ್ತು. ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿ ವಿಚಾರವಾಗಿ ಪ್ರತಾಪಸಿಂಹ ಅವರೇ ನೀವು ಹೇಳಿದ ಕಡೆಯಲ್ಲಿ ಒಂದು ಸಭೆ ಮಾಡೋಣ.
ನೀವು ಏನು ಮಾಡಬೇಕು ಎಂದುಕೊಂಡಿದ್ದೀರಿ ಅದನ್ನ ತಿಳಿಸಿ.ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರನ್ನು ಕರೆದುಕೊಂಡು ಚರ್ಚೆಗೆ ಬರುತ್ತೇವೆ.ಏರ್ ಪೆÇ?ರ್ಟ್ ಅಭಿವೃದ್ಧಿಗೆ ನಿಮ್ಮ ಯೋಜನೆ ಏನಿದೆ ಎಂದು ತಿಳಿಸಲಿ.
ಕೇಂದ್ರ ಸರಕಾರದಿಂದ ಏನೆಲ್ಲಾ ತರಬೇಕೋ ಮೊದಲು ತನ್ನಿ.
ನಮ್ಮಿಂದ ಏನು ಬೇಕು ಎಲ್ಲವನ್ನು ಸಹಕಾರ ಮಾಡಲಿದ್ದೇವೆ ಎಂದರು.
ಏರ್ ಪೆÇ?ರ್ಟ್ ಮಾಡಲಿಲ್ಲ,ನಾಗನಹಳ್ಳಿಯಲ್ಲಿ ರೈಲ್ವೆ ಟರ್ಮಿನಲ್ ಮಾಡುತ್ತೇವೆ ಎಂದು ಹೇಳಿ ಏನು ಮಾಡಲಿಲ್ಲ.ಸುಮ್ಮನೆ ಕೆಳ ಅಧಿಕಾರಿಗಳ ಸಭೆ ನಡೆಸಿ ಮಾತನಾಡುವುದಲ್ಲ. ಚರ್ಚೆಗೆ ಬನ್ನಿ ಎಂದು ಪ್ರತಾಪಸಿಂಹಗೆ ಆಹ್ವಾನಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ರಾಮು, ಮಾದ್ಯಮ ವಕ್ತಾರ ಕೆ.ಮಹೇಶ್ ಇದ್ದರು.
ಸಿಂಹನ ವಿರುದದ್ಧ ಐಟಿ, ಇಡಿಗೆ ದೂರು
ಸಂಸದ ಪ್ರತಾಪ ಸಿಂಹ ಕೊಡಗು ನ್ಯೂಟ್ರಿಷಿಯನ್ ಎಂಬ ಕಂಪನಿಯಲ್ಲಿ ಬೇನಾಮಿ ಹೆಸರಿನಲ್ಲಿ 50 ಕೋಟಿಯಿಂದ 60ಕೋಟಿ ಹೂಡಿಕೆ ಮಾಡಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರೊಬ್ಬರ ಮೂಲಕ ವಸೂಲಿ ಮಾಡುತ್ತಿರುವ ಹಣ ಹಾಗೂ ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್‍ವೇ ಯೋಜನೆಯಲ್ಲಿ ಕಮಿಷನ್ ರೂಪದಲ್ಲಿ ಪಡೆದ ಹಣವನ್ನು ಪ್ರತಾಪ ಸಿಂಹ ಕೊಡಗಿನಲ್ಲಿರುವ ಈ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ.
ಕೆಲವು ಅಧಿಕಾರಿಗಳೂ ಇದರಲ್ಲಿ ಹಣ ಹಾಕಿದ್ದಾರೆ. ಈ ಬಗ್ಗೆ ಐ.ಟಿ ಹಾಗೂ ಇ.ಡಿ.ಗೆ ದೂರು ನೀಡುತ್ತೇನೆ. ತನಿಖೆಗೆ ನಡೆಸುವಂತೆ ಮುಖ್ಯಮಂತ್ರಿಗೂ ಪತ್ರ ಬರೆಯುತ್ತೇನೆಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ತಿಳಿಸಿದರು.