
ಸಂಜೆವಾಣಿ ವಾರ್ತೆ
ದಾವಣಗೆರೆ. ಸೆ.೬; ಕಾಲೇಜ್ ಆಫ್ ಡೆಂಟಲ್ ಸೈನ್ಸ್, ದಾವಣಗೆರೆ ವತಿಯಿಂದ ಆಯೋಜಿಸಲಾಗಿದ್ದ ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾನಿಲಯದ ಬೆಳಗಾಂ ವಲಯದ ಪುರುಷರ ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಕಾಲೇಜಿನ ನಿರ್ಧೇಶಕರಾದ ಡಾ. ವಸುಂಧರಾ ಶಿವಣ್ಣ ಚಾಲನೆ ನೀಡಿ ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾನಿಲಯದವರು ಪಠ್ಯ ಚಟುವಟಿಕೆಗಳಿಗೆ ಅಲ್ಲದೇ ಪಟ್ಯೇತರ ಚಟುವಟಿಕೆಗಳಿಗೂ ಕೂಡ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದು ಇವುಗಳು ಕೇವಲ ಮಾನಸಿಕವಲ್ಲದೇ, ದೈಹಿಕ ಬೆಳವಣೆಗೆಗೂ ಅನುಕೂಲವಾಗುವಂತೆ ಮಾಡಿದ್ದಾರೆ. ಇದರ ಸದುಪಯೋಗ ಮಾಡಿಕೊಂಡು ದಾವಣಗೆರೆಯ ಆತಿಥ್ಯವನ್ನು ಬೆಣ್ಣೆ ದೋಸೆಯೊಂದಿಗೆ ಸವಿಯಿರಿ ಎಂದು ಹೇಳಿದರು.ಕಾಲೇಜಿನ ಪ್ರಾಂಶುಪಾಲರಾದ ಡಾ. ಐ.ಎಮ್.ಅಲಿಯವರು ಹಾಗೂ ವಿಭಾಗದ ಮುಖ್ಯಸ್ಥರಾದ ಡಾ.ಧನ್ಯಕುಮಾರ್ರವರು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.ವೇದಿಕೆಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ವಿಷ್ಣು.ಪಿ., ಗೋಪಾಲಕೃಷ್ಣ.ಕೆ.ಎನ್. ತೀರ್ಪುಗಾರರಾದ ದರ್ಶನ್ ಹಾಗೂ ಪಂದ್ಯಾವಳಿಯ ಆಯೋಜಕ ಕಾರ್ಯದರ್ಶಿಯಾದ ಮಹೇಶ್.ಸಿ.ಪಿ. ಹಾಜರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಮುಕ್ತ ನೆರವೇರಿಸಿಕೊಟ್ಟರು.ಡಾ. ವಸುಂಧರಾ ಶಿವಣ್ಣರವರು ಬಾಸ್ಕೆಟ್ ಬಾಲ್ನ್ನು ಶೂಟ್ ಮಾಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.