ಕಲಬುರಗಿ.ಜೂ.03:ಚಿತ್ತಾಪುರ ಪಟ್ಟಣದ ಆಶ್ರಯ ಬಡಾವಣೆಯಿಂದ 8 ವರ್ಷದ ಮತ್ತು 14 ವರ್ಷದ ಇಬ್ಬರು ಬಾಲಕಿಯರು ಕಾಣೆಯಾದ ಪ್ರಕರಣವನ್ನು ನಿರ್ಲಕ್ಷ್ಯ ಮಾಡಿ, ಕರ್ತವ್ಯ ಲೋಪವೆಸಗಿದ್ದಾರೆ ಎಂಬ ಕಾರಣಕ್ಕೆ ಸ್ಥಳೀಯ ಪೆÇಲೀಸ್ ಠಾಣೆಯ ಪಿಎಸ್ಐ ನಂದಕುಮಾರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆಶ್ರಯ ಬಡಾವಣೆಯಲ್ಲಿ ಇಬ್ಬರು ಬಾಲಕಿಯರು ಕಳೆದ ಮೇ 26ರಂದು ಪಟ್ಟಣದಿಂದ ಕಾಣೆಯಾಗಿದ್ದರು. ಬಾಲಕಿಯರ ಸಂಬಂಧಿಕರು ಪೆÇಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
ಪಟ್ಟಣದ ರೈಲು ನಿಲ್ದಾಣಕ್ಕೆ ತೆರಳಿದ್ದ ಇಬ್ಬರು ತಾಂಡೂರಿಗೆ ಹೋಗಲೆಂದು ಪ್ರಯಾಣಿಸುತ್ತಿದ್ದ ರೈಲು ಹತ್ತಿ ಹೋಗಿದ್ದರು. ಆದರೆ, ತಾಂಡೂರಿನಲ್ಲಿ ರೈಲು ನಿಲುಗಡೆಯಾಗದೆ ನೇರವಾಗಿ ಹೈದ್ರಾಬಾದ್ಗೆ ಹೋಗಿದ್ದಾರೆ. ಅಲ್ಲಿನ ರೈಲು ನಿಲ್ದಾಣದಲ್ಲಿ ಬಾಲಕಿಯರು ಅನಾಥರಾಗಿ ತಿರುಗಾಡುವಾಗ ಅಲ್ಲಿನ ಮಕ್ಕಳ ಸಹಾಯವಾಣಿ ಸಮಿತಿಯವರು ಬಾಲಕಿಯರನ್ನು
ವಶಕ್ಕೆ ಪಡೆದುಕೊಂಡು ವಿಚಾರಿಸಿದ್ದಾರೆ. ಅಗ ಚಿತ್ತಾಪುರದಿಂದ ಬಂದಿದ್ದೇವೆ. ಎಂದು ಬಾಲಕಿಯರು ಮಾಹಿತಿ ನೀಡಿದ್ದಾರೆ. ಹೀಗೆ ಬರಲು ಕಾರಣವನ್ನು ಅಧಿಕಾರಿಗಳ ಮುಂದೆ ಬಾಲಕಿಯರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಾಲಕಿಯರ ಕಾಣೆ ಕುರಿತು ಸ್ಥಳೀಯ ಪೆÇಲೀಸರು ಬಾಲಕಿಯರ ಚಿತ್ರ ಸಹಿತ ಎಲ್ಲ ಠಾಣೆ ಸೇರಿದಂತೆ ಹೈದ್ರಾಬಾದ್ನಲ್ಲೂ ಕರಪತ್ರ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದರು. ಬಾಲಕಿಯರು ಹೈದ್ರಾಬಾದ್ಗೆ ಬಂದಿರುವ ಕುರಿತು ಅಲ್ಲಿನ ಮಕ್ಕಳ ಸಹಾಯವಾಣಿ ಸಮಿತಿಯವರು ಸಿಪಿಐ ಶಿವಾನಂದ್ ಅಂಬಿಗೇರ್ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಶಹಾಬಾದ್ ಡಿವೈಎಸ್ಪಿ ಶೀಲವಂತ್ ಅವರು ಪಿಎಸ್ಐ ನಂದಕುಮಾರ್ ಅವರನ್ನು ಕರೆದುಕೊಂಡು ಹೈದ್ರಾಬಾದ್ಗೆ ತೆರಳಿ, ಬಾಲಕಿಯರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ.
ಬಾಲಕಿಯರು ಕಾಣೆಯಾಗಿರುವ ಪ್ರಕರಣ ಗಂಭೀರವಾಗಿ ಪರಿಗಣಿಸದೆ ಪಿಎಸ್ಐ ಅವರು ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು ಹಿರಿಯ ಪೋಲಿಸ್ ಅಧಿಕಾರಿಗಳ ಮಾರ್ಗದರ್ಶನದಂತೆ ಗುರುವಾರ ರಾತ್ರಿ ಪಿಎಸ್ಐ ನಂದಕುಮಾರ್ ಅವರಿಗೆ ಸೇವೆಯಿಂದ ಅಮಾನತ್ತು ಮಾಡಿ ಆದೇಶ ಮಾಡಿದ್ದಾರೆ.