ಪಾಟ್ನಾ, ಜೂ.೧೪- ಬಾಲಕನನ್ನು ಬಲಿ ಪಡೆದ ಮೊಸಳೆಯನ್ನು ನದಿಯಿಂದ ಹೊರ ತಂದು ಜನರೇ ಸಾಯಿಸಿದ್ದಾರೆ. ಈ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಸಂಭವಿಸಿದೆ.
೪ ವರ್ಷದ ಬಾಲಕ ನದಿಯಲ್ಲಿ ಸ್ನಾನ ಮಾಡುವ ವೇಳೆ ಮೊಸಳೆ ಬಾಲಕನನ್ನು ನೀರಿನೊಳಗೆ ಎಳೆದೊಯ್ದಿದೆ. ಇದರಿಂದಾಗಿ ಬಾಲಕ ಸಾವನ್ನಪ್ಪಿದ್ದಾನೆ.
ಈ ಘಟನೆಯಿಂದ ರೊಚ್ಚಿಗೆದ್ದ ಜನರು ನದಿಯಿಂದ ಮೊಸಳೆಯನ್ನು ಹಿಡಿದು ಹೊರ ತಂದಿದ್ದಾರೆ. ಬಳಿಕ ಗ್ರಾಮಸ್ಥರೆಲ್ಲರೂ ಒಟ್ಟಿಗೆ ಸೇರಿ ಕಟ್ಟಿಗೆಯಿಂದ ಮೊಸಳೆಗೆ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮೊಸಳೆ ಸ್ಥಳದಲ್ಲೇ ಸಾವನ್ನಪ್ಪಿದೆ.
ಪೊಲೀಸರ ಪ್ರಕಾರ, ಬಿದುಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಕುಲಪುರ ನಿವಾಸಿ ಧರ್ಮೇಂದ್ರ ದಾಸ್ ಬೈಕ್ ಖರೀದಿಸಿದ್ದರು. ಇಡೀ ಕುಟುಂಬ ಆತನನ್ನು ಪೂಜಿಸಲು ಗಂಗಾ ನದಿಯ ಖಾಲ್ಸಾ ಘಾಟ್ ತಲುಪಿತ್ತು. ಏತನ್ಮಧ್ಯೆ, ದಾಸ್ ಅವರ ಮಗ ಅಂಕಿತ್ ನೀರನ್ನು ತರಲು ಗಂಗಾನದಿಯ ದಡಕ್ಕೆ ಹೋಗಿದ್ದಾಗ, ಆಗಲೇ ಹೊಂಚು ಹಾಕಿದ ಮೊಸಳೆಯು ಅವನನ್ನು ನದಿಗೆ ಎಳೆದುಕೊಂಡಿತು. ಈ ವೇಳೆ ಆತಂಕದ ವಾತಾವರಣ ಸೃಷ್ಠಿಯಾಯಿತು.
ಈ ಘಟನೆಯಿಂದ ರೊಚ್ಚಿಗೆದ್ದ ಕೂಡಲೇ ಸ್ಥಳೀಯ ಮೀನುಗಾರರು ಬಲೆ ಬೀಸಿ ಮೊಸಳೆಯನ್ನು ಎಳೆದುಕೊಂಡಿದ್ದಾರೆ. ಆಗ ಮೊಸಳೆ ಮಗುವನ್ನು ನೀರಿನಲ್ಲಿ ಹಿಡಿದಿತ್ತು. ಈ ವೇಳೆ ಮಗು ಸಾವನ್ನಪ್ಪಿದೆ.
ಇದರಿಂದ ಕೋಪಗೊಂಡ ಜನರು ಮೊಸಳೆಯನ್ನು ದೊಣ್ಣೆಗಳಿಂದ ಹೊಡೆದು ಸಾಯಿಸಿದ್ದಾರೆ. ಮೊಸಳೆ ಹಿಡಿದ ಕಡೆ ನೀರು ಕಡಿಮೆ ಇತ್ತು. ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮಗುವಿನ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಹಾಗೇ, ಮೊಸಳೆಯ ಶವವನ್ನು ಅರಣ್ಯ ಇಲಾಖೆಗೆ ನೀಡಲಾಗಿದೆ ಎಂದು ಎಂದು ಬಿದುಪುರ ಠಾಣೆ ಪ್ರಭಾರಿ ಸಿರಾಜ್ ಹುಸೇನ್ ತಿಳಿಸಿದ್ದಾರೆ.