ಕೋಲಾರ,ಮೇ,೩೧:ಜಿಲ್ಲೆಯಾದ್ಯಂತ ಮಂಗಳವಾರ ಸಂಜೆ ೩ ಗಂಟೆಯಿಂದ ಸತತವಾಗಿ ಗುಡುಗು ಸಮೇತ ಮಳೆ ಆಭರ್ಟದಿಂದ ಜನ ಜೀವನ ಅಸ್ಥವ್ಯಸ್ಥವಾಗಿದೆ. ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಜನರು ಮನೆ ಬಿಟ್ಟು ಹೊರ ಬಾರದಂತಾಗಿತ್ತು.
ಪ್ರಾರಂಭದಲ್ಲಿ ಮೋಡಕವಿದ ವಾತವರ್ಣದಂತೆ ಕಂಡು ಬಂತು ಸುಮಾರು ೩ ಗಂಟೆ ನಂತರ ಜಿಲ್ಲೆಯ ಬಂಗಾರಪೇಟೆ ಸೇರಿದಂತೆ ಜಿಲ್ಲೆಯಾದ್ಯಂತ ಮಳೆ ಆರ್ಭಟಿಸಿತು. ಸಂಜೆ ೪ ಗಂಟೆ ನಂತರ ಕೋಲಾರ ನಗರದಲ್ಲಿ ಎಡಬಿಡದೆ ಮಳೆ ಸುರಿಯಲಾರಂಭಿಸಿತು. ಈ ವರ್ಷ ಮೊದಲ ದಿನ ಶಾಲೆಗಳಿಗೆ ತೆರಳಿದ್ದ ಮಕ್ಕಳು ಮನೆಗಳಿಗೆ ವಾಪಸ್ ಆಗಲು ಪರದಾಡಬೇಕಾಯಿತು.
ರಾತ್ರಿ ೭ ಗಂಟೆ ನಂತರವೂ ನಗರದಲ್ಲಿ ಮಳೆ ಮುಂದುವರೆದಿತ್ತು. ಸ್ವಲ್ಪ ಮಟ್ಟಿಗೆ ಬಿರುಗಳಿಯು ಕಾಣಿಸಿಕೊಂಡಿತ್ತು. ಗುಡುಗು ಮಿಂಚು ಆರ್ಭಟಗಳು ಹೆಚ್ಚಾದ ಕಾರಣ ಸಾರ್ವಜನಿಕರು ಬೀದಿಗೆ ಬರಲಿಲ್ಲ, ನಗರದಿಂದ ಸಂಜೆ ಊರುಗಳಿಗೆ ತೆರಳಬೇಕಾದವರು ಪರದಾಡುವಂತಾಯಿತು.
ಇನ್ನೇನು ಮಾರುಕಟ್ಟೆ ಪ್ರವೇಶ ಮಾಡಬೆಕಾಗಿದ್ದ ಮಾವು ಫಸಲು ಮತ್ತೆ ಮಣ್ಣು ಪಲಾಗಿದೆ. ಕಳೆದ ವಾರವಷ್ಟೇ ಮಳೆಯಿಂದ ನೆಲಕಚ್ಚಿದ್ದ ಮಾವು ಬೆಳೆಗಾರರು ಚೇತರಿಸಿಕೊಳ್ಳುವ ಮುನ್ನವೆ ಸಂಜೆ ಸುರಿದ ಬಿರುಗಾಳಿ ಮಳೆಗೆ ಮಾರುಕಟ್ಟೆಗೆ ಪ್ರವೇಶ ಮಾಡಬೇಕಾಗಿರುವ ಮಾವು ನೆಲಕಚ್ಚುವಂತೆ ಆಗಿದೆ.
ಮಾವಿನ ಋತು ಆಗಿರುವುದರಿಂದ ತೋಟಗಳಿಂದ ಕಾಯಿಯನ್ನು ಕಿತ್ತು ಮಾರುಕಟ್ಟೆಗೆ ತರಲು ಅವ್ಯವಸ್ಥೆಯು ಉಂಟಾಗಿದೆ, ಪ್ರತಿ ದಿನದಂತೆ ಮಂಗಳವಾರವೂ ಸಹ ತೋಟಗಳಲ್ಲಿ ಮಾವನ್ನು ಕಿತ್ತು ಸಂಜೆ ಮಾರುಕಟ್ಟೆಗೆ ಬರಬೇಕಾಗಿತ್ತು. ಸಂಜೆ ವೇಳೆಗೆ ಮಳೆ ಎಡೆಬಿಡದೆ ಸುರಿದ ಕಾರಣ ಕಿತ್ತ ಮಾವನ್ನು ಮಾರುಕಟ್ಟೆಗೆ ತರಲು ರೈತರು ಪರದಾಡಿದರು.
ಜಿಲ್ಲೆಯ ವಿವಿಧ ಕಡೆಗಳಲ್ಲಿ ಕಳೆದ ವಾರವೆ ಟೊಮೆಟೋ ಮತ್ತು ತರಕಾರಿ ನೆಲಕಚ್ಚಿತ್ತು. ಮಂಗಳವಾರ ಸಂಜೆ ಸುರಿದ ಮಳೆ ಮತ್ತು ಬಿರುಗಾಳಿಯಿಂದ ಟಮೆಟೊ ಸಸಿಗಳು ನೆಲಕಚ್ಚುವಂತಾಗಿದೆ, ಟೊಮೆಟೋಗಾಗಿ ಹೂಳಲಾಗಿದ್ದ ಊರುಗೋಲುಗಳು ಮುರಿದು ಬಿದ್ದಿದ್ದು ಬೆಳೆಗೆ ಅಳವಡಿಸಿದ್ದ ಮಲ್ಚಿಂಗ್ ಪೇಪರ್ ಸಹಾ ಹರಿದು ಹೋಗಿ ರೈತರಿಗೆ ನಷ್ಠವಾಗಿದೆ.
ತಗ್ಗು ಪ್ರದೇಶಗಳಲ್ಲಿ ಮಳೆನೀರು
ಮಂಗಳವಾರ ಸಂಜೆ ಆರಂಭವಾದ ಜೋರು ಮಳೆಯಿಂದ ಕೋಲಾರದ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಯಿತು, ರಸ್ತೆಗಳಲ್ಲಿ ನೀರು ತುಂಬಿದ ಹಿನ್ನೆಲೆ ವಾಹನ ಸವಾರು ಪರದಾಡು ಪರಿಸ್ಥಿತಿ ನಿರ್ಮಾಣವಾಗಿತ್ತು.
ಬಂಗಾರಪೇಟೆ ತಾಲ್ಲೂಕಿನ ಮೂಗನಹಳ್ಳಿ ರಸ್ತೆಯಲ್ಲಿ ಬೃಹತ್ ಮರ ಹಾಗೂ ವಿದ್ಯುತ್ ಕಂಬವು ನೆಲಕ್ಕುಳಿದ ಹಿನ್ನಲೆಯಲ್ಲಿ ಸಾರ್ವಜನಿಕರ ಹಾಗೂ ದ್ವಿಚಕ್ರ ವಾಹನ ಸವಾರರು ಪರದಾಡಬೇಕಾಯಿತು. ಇನ್ನುಳಿದ್ದಂತೆ ಬೂದಿಕೋಟೆ ಬಳಿಯ ಹುನುಕುಳ ದೊಡ್ಡಿ ಬಳಿ ರಸ್ತೆಗೆ ಅಡ್ಡಲಾಗಿ ನೆಲಕ್ಕುರುಳಿದಿದ್ದು, ರೈತರ ಪಾಲಿ ಹೌಸ್ ಸೇರಿದಂತೆ ಶೀಟ್ಗಳು ಬಿರುಗಾಳಿಗೆ ಹಾರಿ ಹೋಗಿರುವುದು ಬಿಟ್ಟರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.