
ಮುನವಳ್ಳಿ,ಏ23: ಪಟ್ಟಣದ ಬಸವಸೇನೆ, ಜೈಂಟ್ಸ್ ಗ್ರುಪ್ ಆಫ್, ರಾಣಿ ಚನ್ನಮ್ಮ ಸಹೇಲಿ, ಶ್ರೀ ಪಂಚಲಿಂಗೇಶ್ವರ ಹಿರಿಯ ನಾಗರಿಕರ ವೇದಿಕೆ, ವಿವಿಧ ಸಂಘಗಳ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆರತಿ ಪೂರ್ಣಕುಂಭಗಳು ಹಾಗೂ ಸುಮಂಗಲೆಯರೊಂದಿಗೆ ಶ್ರೀ ಬಸವೇಶ್ವರರ ಬಾವಚಿತ್ರದ ಭವ್ಯ ಮೆರವಣಿಗೆ ಜರುಗುವದು. ನಂತರ ಶಿವಲಿಂಗೇಶ್ವರ ಮಠದಲ್ಲಿ ಕಾಯಕ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಜರಗುವದು. ಹಾಗೂ ಮಹಾಪ್ರಸಾದೊಂದಿಗೆ ಕಾರ್ಯಕ್ರಮ ಮಂಗಳವಾಗುವದು. ಎಂದು ಬಸವಶೇನೆ ಅದ್ಯಕ್ಷ ಉಮೇಶ ಬಾಳಿ ಪ್ರಕಟಣೆಯಲ್ಲಿ ತಿಳಿಸಿರುವರು.