ಬಸವ ಜಯಂತಿ ಆಚರಣೆ

ವಿಜಯಪುರ.ಏ೨೫:ಗಾಂಧಿಚೌಕದಲ್ಲಿ ಅ. ಶಿ. ವೈ. ನಗರ್ತ ಯವಕ ಸಂಘ, ಶ್ರೀ ನಗರೇಶ್ವರ ಸ್ವಾಮಿ ಸೇವಾ ಟ್ರಸ್ಟ್, ರಾಷ್ಟ್ರೀಯ ಬಸವದಳದ ಹಾಗೂ ನಗರ್ತ ಹಾಗೂ ವೀರಶೈವ ಸಮಾಜದ ಎಲ್ಲಾ ಅಂಗ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿಅಶ್ವಾರೂಢ ಬಸವಣ್ಣನವರ ಉತ್ಸವ ಮೂರ್ತಿಯನ್ನು ಡೊಳ್ಳು ಕುಣಿತ,ಅಲಂಕೃತ ವಿದ್ಯುತ್ ದೀಪ ಅಲಂಕಾರಗಳೊಂದಿಗೆ ಕೂಡಿದ ಪಲ್ಲಕ್ಕಿಯಲ್ಲಿ ಪಟ್ಟಣದ ಮುಖ್ಯಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಎಂ.ಸತೀಶ್ ಕುಮಾರ್ ಅವರನ್ನು ಗೌರವಿಸಲಾಯಿತು. ಕೇಬಲ್ ಸುರೇಶ್,ರಾಷ್ಟ್ರೀಯ ಬಸವ ದಳದ ಖಜಾಂಚಿ ಬೇಕರಿ ಶಿವಣ್ಣ,ಕೋರಮಂಗಲ ರುದ್ರಪ್ಪ ಟ್ರಸ್ಟ್‌ನ ಅಧ್ಯಕ್ಷ ಸಿ.ಭಾಸ್ಕರ್, ನಗರ್ತ ಯುವಕಸಂಘದ ಗೌರವಾಧ್ಯಕ್ಷ ಜೆ.ಆರ್.ಪಿ. ಮುರಳೀಧರ್, ಕಾರ್ಯದರ್ಶಿ ಅಮರ್,ಸಹ ಕಾರ್ಯದರ್ಶಿ ಮನೋಹರ್, ಮಹಂತಿನ ಮಠ ಧರ್ಮಸಂಸ್ಥೆಯ ಅಧ್ಯಕ್ಷ ಬಿ.ಪ್ರಭುದೇವ್, ಕಾರ್ಯದರ್ಶಿ ವಿ.ವಿಶ್ವನಾಥ್, ಬೇಕರಿ ಆನಂದಪ್ಪ, ಎಎಸ್‌ವಿ ನಗರ್ತ ವಿದ್ಯಾವರ್ಧಕ ಸಂಘದ ಮಾಜಿ ನಿರ್ದೇಶಕಿ ಭಾರತಿ, ಮಾಜಿ ನಿರ್ದೆಶಕ ಸಿ.ಸುರೇಶ್, ಎನ್.ರುದ್ರಮೂರ್ತಿ, ಶಿಕ್ಷಕ ಬಸವರಾಜು, ನಿವೃತ್ತ ಪೌರಾಯುಕ್ತ ವಿ.ಶಿವಕುಮಾರ್, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.