ಜಯಶಾಲಿಯಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಬಸವರಾಜ ಕಾಮಶೆಟ್ಟಿ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಪತ್ರಿಕಾ ಭವನದಲ್ಲಿ ಜರುಗಿದ ಸನ್ಮಾನ ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಭವಾನಿಸಿಂಗ್ ಠಾಕೂರ್, ಜಿಲ್ಲಾಧ್ಯಕ್ಷರಾದ ಡಿ.ಕೆ ಗಣಪತಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಅಪ್ಪಾರಾವ್ ಸೌದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಉಪಾಧ್ಯಕ್ಷರಾದ ಶ್ರೀನಿವಾಸ ಚೌದ್ರಿ, ನಾಗಶೆಟ್ಟಿ ಧರಂಪುರ್, ಕಾರ್ಯದರ್ಶಿ ಪೃಥ್ವಿರಾಜ್ ಎಸ್, ಸುನಿಲ ಕುಲಕರ್ಣಿ, ಶ್ರೀಕಾಂತ ಬಿರಾದಾರ, ಖಜಾಂಚಿ ಎಂ.ಪಿ ಮುದಾಳೆ, ನಿಯೋಜಿತ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ಅಲಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಹಾಜಿಪಾಶಾ, ಶರದ್ ಘಂಟೆ, ಸಂತೋಷ ಚಟ್ಟಿ, ತಾಲೂಕು ಪದಾಧಿಕಾರಿಗಳಾದ ಮಾರ್ತಂಡ ಜೋಷಿ, ಉದಯಕುಮಾರ ಮುಳೆ, ಜೈರಾಜ ದಾಬಸೆಟ್ಟಿ, ಗಣಪತಿ ಬೋಚರೆ, ನವೀನ ಗಂಜಿ, ಸಯ್ಯದ್ ಮುಸ್ಥಾಫಾ ಖಾದ್ರಿ, ಗಣಪತಿ ಕುರ್ನಾಳೆ, ಮಾಧು ಬರ್ಗೆ, ಶಿವಕುಮಾರ ಮುಕ್ತೆದಾರ ಸೇರಿದಂತೆ ಜಿಲ್ಲೆಯ ಇತರೆ ಪದಾಧಿಕಾರಿಗಳು ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಹಾಗೂ ಎಲ್ಲ ತಾಲೂಕುಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಈ ಸಂದರ್ಭದಲ್ಲಿ ಹಾಜರಿದ್ದರು ಹಾಗೂ ಇತರರು ಉಪಸ್ಥಿತರಿದ್ದರು.