ಚಿತ್ರದುರ್ಗ ಜೂ. 26 : ನಗರದ ಶ್ರೀ ಮುರುಘಾಮಠದಲ್ಲಿಂದು ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಅವರು ಎಂದಿನAತೆ ಮುಂಜಾನೆ ಶ್ರೀಮಠದಲ್ಲಿ ಕರ್ತೃಗದ್ದುಗೆಗೆ ಪೂಜೆಯನ್ನು ಸಲ್ಲಿಸಿ, ಅಲ್ಲಿಯೇ ಸ್ವಲ್ಪ ಸಮಯದವರೆಗೆ ಧ್ಯಾನವನ್ನು ಮಾಡಿ, ನಂತರ ಮೌನವಾಗಿದ್ದು ಗ್ರಂಥಗಳ ಅಧ್ಯಯನ ಮಾಡಿದರು. ಯಾರಾದರೂ ಭಕ್ತರು ದರ್ಶನ್ಕಕಾಗಿ ಬಂದರೆ ಅವರಿಗೆ ಮೌನವಾಗಿಯೇ ಆಶೀರ್ವಾದ ನೀಡಿದರು. ಒಂದುದಿನ ಪೂರ್ತಿಯಾಗಿ ಮೌನವಾಗಿರುವೆ ಎಂದು ನಿನ್ನೆದಿನ ಸ್ವಾಮೀಜಿ ಅವರು ತಮ್ಮ ವಾಟ್ಸಾಪ್ ಮತ್ತು ಫೇಸ್ಬುಕ್ನಲ್ಲಿ ‘ಮೌನಂ ಶರಣಂ ಗಚ್ಚಾಮಿ’ ಎಂಬ ಸಂದೇಶವನ್ನು ಬರೆದಿದ್ದರು. ಹಾಗಾಗಿ ಸ್ವಾಮೀಜಿಯವರು ಮುಂಜಾನೆಯಿAದಲೇ ಮೌನವಾಗಿದ್ದದ್ದು ಕಂಡುಬAತು. ಸ್ಥಳೀಯ ಶಾಸಕರಾದ ಕೆ.ಸಿ. ವೀರೇಂದ್ರ ಪಪ್ಪಿಯವರು ಮತ್ತು ನೂರಾರು ಭಕ್ತರು ಸೇರಿ ಯಾರೇ ದರ್ಶನಕ್ಕೆ ಬಂದರೂ ಕೂಡ ತಮ್ಮ ಮೌನವ್ರತವನ್ನು ಸ್ವಾಮೀಜಿ ಬಿಡಲಿಲ್ಲ. ಸ್ವಾಮೀಜಿ ತುಂಬಾ ಶಾಂತವಾಗಿ ಎಲ್ಲರಿಗೂ ಹಸನ್ಮುಖದಿಂದ ಶುಭ ಹಾರೈಸಿದರು.ಸ್ವಾಮೀಜಿ ಆಸೀನರಾದ ಜಾಗದಲ್ಲಿ ‘ಇವತ್ತು ನಾನು ಮೌನವಾಗಿದ್ದೇನೆ’ ಎಂಬ ಸಂದೇಶವಿದ್ದುದರಿAದ ಭಕ್ತರು ಆ ಸಂದೇಶವನ್ನು ನೋಡಿ, ಅವರು ಮೌನವಾಗಿ ಸ್ವಾಮೀಜಿಯವರಿಗೆ ನಮಸ್ಕರಿಸಿ ಆಶೀರ್ವಾದವನ್ನು ಪಡೆದರು.