ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ಗೆನಿವೇಶನ‌ ಪಡೆಯಲು ಪ್ರಯತ್ನ: ಬ್ರಹ್ಮಯ್ಯ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.23: ನಗರದ ಬಿಪಿಎಸ್ಸಿ ಶಾಲೆಯ ಶರಣ ಸಭಾಂಗಣದಲ್ಲಿ ಇಂದು ಇಲ್ಲಿನ  ಬಳ್ಳಾರಿ‌ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ನ ವಾರ್ಷಿಕ ಮಹಾ ಸಭೆ ನಡೆಯಿತು.
ಸಭೆಯಲ್ಲಿ ಅಸೋಸಿಯೇಷನ್ ಅಧ್ಯಕ್ಷ ಶೀಲಾ ಬ್ರಹ್ಮಯ್ಯ ಪ್ರಸ್ತಾವಿಕವಾಗಿ ಮಾತನಾಡಿ, ಅಸೋಸಿಯೇಷನ್ ನ‌ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿ. ಅಸೋಸಿಯೇಷನ್ ಗೆ ಖಾಯಂ ನಿವೇಶನ‌ ಪಡೆದು ಕಟ್ಟಡ ಕಟ್ಟಲು ಪ್ರಯತ್ನಿಸಲಿದೆಂದರು.
ಇತ್ತೀಚೆಗೆ ನಿಧನರಾದ ಪ್ರಾಂಶುಪಾಲ ಮೋಹನ್ ರೆಡ್ಡಿ, ಬೆಳಗಲ್ಲು ವೀರಣ್ಣ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯ್ತು. ಜಂಟಿ ಕಾರ್ಯದರ್ಶಿ ಎಂ.ಟಿ.ಮಲ್ಲೇಶ್ ವಾರ್ಷಿಕ ವರದಿ ಮಂಡಿಸಿದರು.
ಸದಸ್ಯರುಗಳಾದ ಯಶವಂತ್ ಭೂಪಾಲ್, ಪಾಲಿಕೆ ಸದಸ್ಯ ಪಿ.ಗಾದೆಪ್ಪ ವೇದಿಕೆಯಲ್ಲಿದ್ದರು. ಟಿ.ಹೆಚ್.ಎಂ.ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು.  ಎನ್.ಪ್ರಕಾಶ್ ವಂದನಾರ್ಪಣೆ, ವಲಿ ಅಹಮ್ಮದ್ ಪ್ರಾರ್ಥನೆ ಮಾಡಿದರು.