ಬಡಜನರ ಅಭಿವೃದ್ಧಿಯೇ ನನ್ನ ಗುರಿ ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ,ಮೇ,೧೮-ಸಾಮಜಿಕ ನ್ಯಾಯದ ಅನುಷ್ಟಾನಕ್ಕಾಗಿ ಕ್ಷೇತ್ರದಲ್ಲಿರುವ ಹಿಂದುಳಿದ ಅಲ್ಪಸಂಖ್ಯಾತ ಹಾಗು ಶೋಷಿತ ಸಮುದಾಯಗಳ ಅಭಿವೃದ್ಧಿಯನ್ನು ಕಳೆದ ಹತ್ತು ವರ್ಷಗಳಿಂದ ನಿರ್ಲಕ್ಷಿಸಿರುವುದು ದುರಂತದ ಸಂಗತಿಯಾಗಿದೆ. ಜಮೀನುಗಳ ವಿಚಾರದಲ್ಲಿ ಎಲ್ಲಾ ವರ್ಗದ ಜನರಿಗೂ ಅನ್ಯಾಯವಾಗಿದೆ, ಸೂರು ರಹಿತ ಜನರಿಗೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸಿಲ್ಲ, ವಿಶೇಷವಾಗಿ ಪರಿಶಿಷ್ಟ ಜಾತಿ ಜನಾಂಗದ ಬಂಧುಗಳಿಗೆ ಸಿಗಬೇಕಾದ ಸರ್ಕಾರಿ ಸೌಲತ್ತುಗಳು ಸಿಗದೆ ತೀವ್ರವಾದ ಅನ್ಯಾಯವಾಗಿದೆ. ಇವರ ಅಭಿವೃದ್ಧಿಗಾಗಿ ವಿಶೇಷ ಆಸಕ್ತಿ ವಹಿಸಿ ಪ್ರಾಮಾಣಿಕವಾಗಿ ಶ್ರಮಿಸುತ್ತೆನೆ ಇದಕ್ಕೆ ಎಲ್ಲ ವರ್ಗದ ಜನರ ಸಹಕಾರ ಬಯಸುತ್ತೇನೆ ಎಂದು ನೂತನವಾಗಿ ಆಯ್ಕೆಯಾಗಿರುವ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದಲ್ಲಿ ರೋಡ್ ಶೋ ನಡೆಸಿದ ಅವರು ಸಾರ್ವಜನಿಕರಿಗೆ ಕೃತಙ್ಞತೆ ಸಲ್ಲಿಸಿ ಮಾತನಾಡಿ, ಕ್ಷೇತ್ರದಲ್ಲಿ ಬಡಜನರಿಗಾಗಿ ಮಾಡಬೇಕಾದ ಕೆಲಸಗಳು ಹೆಚ್ಚಾಗಿದೆ ಸರ್ಕಾರದ ಸೌಲತ್ತುಗಳನ್ನು ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಜರೂರಾಗಿ ಆಗಬೇಕಿದೆ ಅದಕ್ಕೆ ಆದ್ಯತೆ ಕೊಡಬೇಕು, ಅಧಿಕಾರಿಗಳ ಸಹಕಾರ ಪಡೆದು ಈ ತಕ್ಷಣದಿಂದಲೇ ಕೆಲಸ ಮಾಡುತ್ತೇನೆ ಎಂದರು.
ಪಟ್ಟಣದ ರಸ್ತೆಗಳು ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲೂ ಆಗಿರುವಂತ ಅನ್ಯಾಯಗಳನ್ನು ಸರಿಮಾಡಬೇಕಿದೆ ಅಧಿಕಾರಿಗಳ ಬೇಜವಬ್ದಾರಿ ಹಾಗು ಅಕ್ರಮಗಳ ಕುರಿತಾಗಿ ಪರಶೀಲನೆ ಮಾಡುವುದಾಗಿ ತಿಳಿಸಿದರು.
ರಾಜಕೀಯ ವಿಚಾರಕ್ಕಾಗಿ ಯಾರು ಧ್ವೇಷದ ಭಾವನೆ ಬೆಳಸಿ ಕೊಳ್ಳಬೇಡಿ ಶಾಂತಿಯಿಂದ ವರ್ತಿಸಿ ಎಲ್ಲರು ಸಹೋದರತ್ವದಿಂದ ಸೌಹಾರ್ಧತೆಯನ್ನು ಕಾಪಾಡಿ ಕೊಳ್ಳಿ ಎಂದು ಕಿವಿ ಮಾತು ತಿಳಿಸಿದರು,
ಮುಖಂಡರಾದ ಶೇಷಾಪುರ ಡಾ.ಗೋಪಾಲ್, ಎಸ್.ಎಲ್.ಎನ್.ಮಂಜುನಾಥ್, ಶೋರೂಮ್ ನಾರಯಣಸ್ವಾಮಿ, ಮೀಸಗಾನಹಳ್ಳಿ ವೆಂಕಟರೆಡ್ಡಿ, ಬಿ.ಕೃಷ್ಣಾರೆಡ್ಡಿ, ನಾಸೀರ್, ಕಿಸಾನ್ ಏಜಾಜ್, ಕೆ.ಎಂ.ಎಫ್ ಮಾಜಿ ನಿರ್ದೇಶಕ ಪಾಳ್ಯಂಬೈರೆಡ್ಡಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಹಳೇಪೇಟೆ ಮಂಜು, ರಾಮಚಂದ್ರೇಗೌಡ, ಕೃಷ್ಣಾರೆಡ್ಡಿ,ಪುರಸಭೆ ಮಾಜಿ ಅಧ್ಯಕ್ಷ ಮುನಿಯಪ್ಪ, ಹಾಲಿ ಸದಸ್ಯ ಆನಂದಗೌಡ ಇದ್ದರು.