ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಅ.11 :- ಕರ್ನಾಟಕ ಅರಣ್ಯ ಇಲಾಖೆ ವತಿಯಿಂದ ಸಿಬ್ಬಂದಿಗಳಿಗೆ ಆಯೋಜಿಸಿದ್ದ ವನ್ಯಜೀವಿ ಫೋಟೋಗ್ರಫಿ ಸ್ಪರ್ಧೆ ನಡೆಸಿತ್ತು ಇದರಲ್ಲಿ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಉಪವಿಭಾಗದ ಗುಡೇಕೋಟೆ ವಲಯದ ಉಪ ಅರಣ್ಯಅಧಿಕಾರಿ ಮಹೇಶ ಪಾಲವ್ವನವರ ಇವರು ತೆಗೆದ ಫೋಟೋಗ್ರಾಫಿಗೆ ರಾಜ್ಯದ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ವಿಜೇತರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು.