
ಹರಿದು ಬಂದ ಜನಸಾಗರ
ಬೆಂಗಳೂರು, ಆ.೧೫-ಲಾಲ್ಬಾಗ್ನಲ್ಲಿ ಸತತ ಹನ್ನೊಂದು ದಿನಗಳ ಕಾಲ ಏರ್ಪಡಿಸಿದ್ದ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಇಂದು ತೆರೆ ಬಿದ್ದಿದ್ದು, ಈ ವಿಶೇಷವಾಗಿ ನಿರ್ಮಿಸಿದ್ದ ಕರ್ನಾಟಕದ ಎರಡನೇ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ನೆನಪಿನ ಹೂವಿನ ಪ್ರತಿಬಿಂಬಗಳನ್ನು ವೀಕ್ಷಿಸಲು ಕೊನೆಯ ದಿನವಾದ ಸಸ್ಯಕಾಶಿಗೆ ಜನಸಾಗರವೇ ಹರಿದು ಬಂತು.
ಆ.೪ರಿಂದ ೧೫ರವರೆಗೆ ಒಟ್ಟಾರೆ ೫ ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದು, ೧.೭೯ ಕೋಟಿಗೂ ಅಧಿಕ ಹಣ ಸಂಗ್ರಹವಾಗುವ ಮೂಲಕ ದಾಖಲೆ ನಿರ್ಮಿಸಿದೆ. ಅದರಲ್ಲೂ ಇಂದು ಸ್ವಾತಂತ್ರ್ಯೋತ್ಸವದ ರಜಾ ದಿನವಾದ ಆ.೧೫ರಂದು ಒಂದೇ ದಿನ ಸುಮಾರು ಲಕ್ಷಾಂತರ ಮಂದಿ ಪ್ರದರ್ಶನ ವೀಕ್ಷಿಸಿದರು.ರಜಾ ದಿನಗಳಂದು ಹೆಚ್ಚಿನ ವೀಕ್ಷಕರು ಆಗಮಿಸಿದ್ದರು. ಪ್ರವೇಶ ಶುಲ್ಕವೂ ೮೦ ರೂ. ಗಳಿದ್ದುದರಿಂದ ಹೆಚ್ಚಿನ ಹಣ ಸಂಗ್ರಹಗೊಂಡಿದೆ. ಒಟ್ಟಾರೆ, ಈ ಬಾರಿ ಅತಿ ಹೆಚ್ಚು ಹಣ ಸಂಗ್ರಹವಾಗಿದೆ. ಇದೆಲ್ಲವೂ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ನೆನಪಿನ ಮಹಿಮೆ. ಈ ಬಾರಿಯ ಫಲಪುಷ್ಪ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿದೆ.ಆಗಸ್ಟ್ ೪ರಂದು ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಆರಂಭವಾಯಿತು. ಈ ಬಾರಿ ವಿಧಾನಸೌಧದ ಕಲಾಕೃತಿ ಗಾಜಿನ ಮನೆಯ ಮುಖ್ಯ ಆಕರ್ಷಣೆಯಾಗಿತ್ತು.ಅದರಲ್ಲೂ, ವಿಧಾನಸೌಧದ ೧೮ ಅಡಿ ಪ್ರತಿಕೃತಿ, ೧೪ ಅಡಿಯ ಕೆಂಗಲ್ ಹನುಮಂತಯ್ಯ ಪ್ರತಿಮೆ ಈ ಬಾರಿಯ ಫಲಪುಷ್ಪ ಪ್ರದರ್ಶನದ ವಿಶೇಷವಾಗಿದೆ.ಲಕ್ಷಾಂತರ ಮಂದಿ ಭೇಟಿ ನೀಡಿ ಪ್ರದರ್ಶನ ವೀಕ್ಷಿಸಿದರು.
ಕೊನೆಯ ದಿನ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ರಜೆ ಇರುವುದರಿಂದ ನೋಡುಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಹೀಗಾಗಿ, ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಗಾಜಿನ ಮನೆಯ ಹೊರಾಂಗಣದಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಭದ್ರತಾ ಸಿಬ್ಬಂದಿ, ಸ್ವಯಂ ಸೇವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು.ಇನ್ನೂ, ಭಾನುವಾರ ಒಂದೂ ಕಾಲು ಲಕ್ಷ ಜನ ಭೇಟಿ ಲಾಲ್ಬಾಗ್ ಪುಷ್ಪ ಪ್ರದರ್ಶನ ವೀಕ್ಷಿಸಲು ನಾನಾ ಭಾಗಗಳಿಂದ ಭಾನುವಾರ ಜನಸಾಗರವೇ ಹರಿದು ಬಂದಿಧಿತ್ತು. ಭಾನುವಾರ ಒಂದೇ ದಿನ ೧.೨೫ ಲಕ್ಷ ಮಂದಿ ಆಗಮಿಸಿದ್ದು, ಪ್ರವೇಶ ಶುಲ್ಕದ ರೂಪದಲ್ಲಿಒಟ್ಟಾರೆ ೮೦.೫೦ ಲಕ್ಷ ರೂ. ಸಂಗ್ರಹವಾಗಿತ್ತು. ಪ್ರವೇಶ ದ್ವಾರಗಳಲ್ಲಿಒಳಗೂ, ಹೊರಗೂ ಜನಸಂದಣಿ ಹೆಚ್ಚಾಗಿತ್ತು. ಅಷ್ಟೇ ಅಲ್ಲ, ಈ ಮಾರ್ಗದಲ್ಲಿಸಂಚರಿಸುವ ಬಿಎಂಟಿಸಿ ಬಸ್ಗಳು, ಮೆಟ್ರೋ ರೈಲುಗಳಲ್ಲಿಕೂಡ ಪ್ರಯಾಣಿಕರ ಸಂಖ್ಯೆ ಎರಡರಿಂದ ಮೂರು ಪಟ್ಟು ಹೆಚ್ಚಾಗಿತ್ತು.
ಜನವೋ ಜನ: ಮತ್ತೊಂದೆಡೆ
ಉದ್ಯಾನದ ನಾಲ್ಕು ಪ್ರವೇಶ ದ್ವಾರಗಳಲ್ಲಿ ಜನ ಸಾಲುಗಟ್ಟಿ ಬರುತ್ತಿದ್ದರು. ಅದರಲ್ಲೂವೆಸ್ಟ್ ಗೇಟ್ನಲ್ಲಿ ಈ ಸಂಖ್ಯೆ ಹೆಚ್ಚಾಗಿತ್ತು. ಉಚಿತ ಬಸ್ ಪ್ರಯಾಣದ ವ್ಯವಸ್ಥೆಯಿದ್ದರೂ, ಕೆಲವರು ಕುಟುಂಬ ಸಮೇತರಾಗಿ ಮೆಟ್ರೊದಲ್ಲೇ ಲಾಲ್ಬಾಗ್ಗೆ ಆಗಮಿಸಿದರು. ಹೀಗಾಗಿ, ಲಾಲ್ಬಾಗ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಮೆಟ್ರೊ ರೈಲಿನಲ್ಲಿ ಜನದಟ್ಟಣೆ ಕಂಡು ಬಂತು.ಸಂಜೆ ವೇಳೆಗೆ ಮೆಟ್ರೋದಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರ ಸಂಖ್ಯೆ ಹೆಚ್ಚಾಯಿತು. ಈ ವೇಳೆ ಮೆಜೆಸ್ಟಿಕ್ನಲ್ಲಿ ಪ್ರಯಾಣಿಕರು ಹತ್ತಿ, ಇಳಿಯುವುದಕ್ಕೂ ಹರಸಾಹಸ ಪಟ್ಟರು.ಇಂದು ಮುಂಜಾನೆ ಬೆಳಗ್ಗೆ ೬ ಗಂಟೆಯಿಂದಲೇ ಪ್ರದರ್ಶನಕ್ಕೆ ಜನ ಬರಲಾರಂಭಿಸಿದರು. ವಾಹನ ಮತ್ತು ಜನ ಸಂಚಾರದಿಂದ ಲಾಲ್ಬಾಗ್ ಸುತ್ತಮುತ್ತಲಿನ ರಸ್ತೆಗಳಾದ ಸಿದ್ದಾಪುರ, ಅಶೋಕ ಪಿಲ್ಲರ್ ಆರ್.ವಿ. ರಸ್ತೆ, ಹೊಸೂರು ರಸ್ತೆ, ಸೌತ್ಎಂಡ್ ಸೇಧಿರಿಧಿದಂತೆ ನಾನಾ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಇದನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.