
ವಾಡಿ: ಮೇ.16: ಚಿತ್ತಾಪುರ ಮತಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲವು ಸಾಧಿಸಿದ ಶಾಸಕ ಪ್ರಿಯಾಂಕ್ ಖರ್ಗೆ ಅವರ ಗೆಲುವಿನ ಹಿನ್ನೆಲೆಯಲ್ಲಿ, ಕ್ರೈಸ್ತ್ ಭಾಂದವರು ಚರ್ಚನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಸಿಹಿ ತಿನಿಸುವ ಮೂಲಕ ಪರಸ್ಪರ ಶುಭಾಶಯ ಕೋರಿದಾಗ ಚರ್ಚನಲ್ಲಿ ಸಂಭ್ರಮ ಕಂಡು ಬಂತು. ಈ ಸಂದರ್ಭದಲ್ಲಿ ಚರ್ಚನ್ ಫಾದರ್ ರೋಶನ್, ಸಿಸ್ಟರ್ ಗ್ರೇಸಿ, ವಸಂತಾ, ಮುಖಂಡರಾದ ಆನಂದ, ರಾಯಪ್ಪ, ಜಯರಾಜ ಜಾನ, ಚಿನ್ನಪ್ಪ, ಬಾಗ್ಯನಾಥ, ರಾಜು, ನವೀನ, ಪ್ರಕಾಶ, ಬಾಲರಾಜ, ಸಾಗರ, ರಾಬರ್ಟ್, ವಿಲೀಯಂ ಸೇರಿದಂತೆ ಅನೇಕರು ಇದ್ದರು.