ರಾಣೇಬೆನ್ನೂರು, ಮಾ.25: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾವೇರಿ ಜಿಲ್ಲಾಧ್ಯಕ್ಷ, ರೈತ ಹೋರಾಟಗಾರ, ಸಮಾಜ ಸೇವಕ ಕೃಷ್ಣಮೂರ್ತಿ ಲಮಾಣಿ ಅವರು “ರಾಷ್ಟ್ರೀಯ ನೇಗಿಲಯೋಗಿ ರತ್ನ ಪ್ರಶಸ್ತಿ” ಗೆ ಭಾಜನರಾಗಿದ್ದಾರೆ.
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಅವರು ಸಮಾಜಮುಖಿ ಸೇವಾ ಸಂಸ್ಥೆ ಮತ್ತು ಶ್ರೀ ಗುರು ಸೋಮಲಿಂಗೇಶ್ವರ ಸಾಂಸ್ಕøತಿಕ ಕಲಾ ಸಂಘ ಇವರುಗಳು ಪ.ಪೂ ಶ್ರೀ ಸಿದ್ದೇಶ್ವರ ಮಹಾಸ್ವಾಮಿಜಿಯವರಿಗೆ ನುಡಿ ನಮನ ಹಾಗೂ ಕರ್ನಾಟಕ ರತ್ನ ಡಾ|| ಪುನೀತ ರಾಜಕುಮಾರ ಸ್ಮರಣಾರ್ಥ 2023-2024 ನೇ ಸಾಲಿಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೀಡಿದ ಸನ್ಮಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು.