
ಧಾರವಾಡ,ಏ.17:ಡಾ. ಬೆಟಗೇರಿಕೃಷ್ಣಶರ್ಮರು ನವೋದಯಕಾಲದ ಶುದ್ಧಜನಪದ ಶೈಲಿಯ ಕವಿಗಳಾಗಿದ್ದರು.ಅವರಎಲ್ಲಾ ಹಾಡುಗಳನ್ನು ಹುಕ್ಕೇರಿ ಬಾಳಪ್ಪನವರು ಭಾವಪೂರ್ಣವಾಗಿ, ರಸಪೂರ್ಣವಾಗಿ ಹಾಡಿಜನಮನ್ನಣೆ ಪಡೆದರುಎಂದು ಬೆಳಗಾವಿಯ ಸಾಹಿತಿ ಶಿರೀಷ ಜೋಶಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ಕನ್ನಡ ಮತ್ತು ಮರಾಠಿ ಭಾಷಾ ಬಾಂಧವ್ಯ ಬಲಪಡಿಸಲೆಂದು ‘ಡಾ.ಪಂಡಿತ ಅವಳೀಕರ ಅವರುಕೊಡಮಾಡಿದದತ್ತಿ’ ಅಂಗವಾಗಿ ಆಯೋಜಿಸಿದ್ದ ‘ಆನಂದ ಕಂದ-2023’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ನಾವೆಲ್ಲಾ ಬಾಲ್ಯದಿಂದಆನಂದಕಂದರ ಹಾಡುಗಳನ್ನೇ ಕೇಳುತ್ತಾ ರಸಸ್ವಾದನೆ ಮಾಡಿ ಬೆಳೆದವರು.ಕನ್ನಡ-ಮರಾಠಿ ಭಾಷಾ ಬಾಂಧವ್ಯ ಬಲಪಡಿಸಲು ಪಂ.ಅವಳೀಕರ ಪ್ರಶಸ್ತಿ ನನಗೆ ಲಭಿಸಿದ್ದು ನನ್ನ ಸುಕೃತ ಫಲ.ಈ ಪ್ರಶಸ್ತಿ ನನ್ನಜವಾಬ್ದಾರಿ ಹೆಚ್ಚಿಸಿದೆ. ಕ.ವಿ.ವ. ಸಂಘಕ್ಕೆ ನಾನು ಚಿರಋಣಿಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಬೆಟಗೇರಿಕೃಷ್ಣಶರ್ಮ ಸ್ಮಾರಕಟ್ರಸ್ಟ್ಅಧ್ಯಕ್ಷರಾದಡಾ.ರಾಘವೇಂದ್ರ ಪಾಟೀಲ ಮಾತನಾಡಿ, ಆನಂದಕಂದರುಕಲಿತದ್ದು ಬರಿ ಏಳನೇಯ ತರಗತಿ.ಅವರಿಗೆಆಂಗ್ಲ ಭಾಷೆಕಲಿಯುವ ಅವಕಾಶವೇ ಸಿಗಲಿಲ್ಲ. ಔಪಚಾರಿಕ ಶಿಕ್ಷಣದಿಂದ ವಂಚಿತರಾದಅವರುಜೀವನದುದ್ದಕ್ಕೂಕ್ಲಿಷ್ಟ ಸಮಸ್ಯೆಗಳನ್ನೆದುರಿಸಿ ಬಾಳಿದರು.ಅವರುತಮ್ಮ ಸ್ವಪ್ರತಿಭೆಯಿಂದಲೇಅಪಾರ ವಿದ್ವತ್ ಸಾಧಿಸಿದರು.ಹಳೆಗನ್ನಡ ಸಾಹಿತ್ಯದ ಪ್ರಕಾಂಡ ಪಂಡಿತರಾದರು.
1922ರಲ್ಲಿ ‘ಮಾತೃಭೂಮಿ’ ಪತ್ರಿಕೆಯ ಸಂಪಾದಕರಾಗಿ ಈ ಪತ್ರಿಕೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಪೂರ್ತಿ ನೀಡುವ ಲೇಖನ ಬರೆದರು. ಮುಂದೆ ಸ್ವಧರ್ಮ ಹಾಗೂ ಜಯಕರ್ನಾಟಕ ಪತ್ರಿಕೆಯನ್ನು ಕೆಲ ಕಾಲ ಸಂಪಾದನೆ ಮಾಡಿ 1938 ರಲ್ಲಿ ‘ಜಯಂತಿ’ ಎಂಬ ಹೆಸರಿನ ಪತ್ರಿಕೆಯಜವಾಬ್ದಾರಿ ಹೊತ್ತರು. ಈ ಪತ್ರಿಕೆ 23 ವರ್ಷ ನಿರಂತರವಾಗಿ ಹೊರಹೊಮ್ಮಿಜನಾನುರಾಗಿ ಪತ್ರಿಕೆಯಾಯಿತು.ಈ ಪತ್ರಿಕೆಯ ಮೂಲಕ ಜನರಿಗೆ ಲೋಕ ಶಿಕ್ಷಣ ಒದಗಿಸಲು ಸಾಧ್ಯವಾಯಿತು.ಏಕೀಕರಣದ ಸಂದರ್ಭದಲ್ಲಿ ಪತ್ರಿಕೆಗೆಆರ್ಥಿಕ ಸಂಕಷ್ಟ ಎದುರಾಗಿ ಸಾಲಗಾರರಾಗಬೇಕಾಯಿತು.ತಮ್ಮ ಬಹುಮುಖ ಪ್ರತಿಭೆಯಿಂದ ಈ ನಾಡನ್ನು ಬೆಳಗಿದ ಆನಂದಕಂದರು ನಮಗೆಲ್ಲಾ ಸ್ಮರಣೀಯರುಎಂದರು.
ಕ.ವಿ.ವ. ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾರಂಭದಲ್ಲಿಧಾರವಾಡದ ‘ಆನಂದಕಂದ’ ಗೆಳೆಯರ ಬಳಗದಿಂದ ಗೀತಗಾಯನ ಪ್ರಸ್ತುತ ಪಡಿಸಲಾಯಿತು. ಗಾಯನದಲ್ಲಿರಾಜುಕುಲಕರ್ಣಿ, ಶಂಕರ ಮಂಗಳಗಟ್ಟಿ, ಹೇಮಂತ ಲಮಾಣಿ, ಸೋಮಲಿಂಗ ಜಾಲಿಹಾಳ, ಶ್ರೀನಾಥ ಬೆಟಗೇರಿ, ವೀಣಾಚಿಕ್ಕಮಠಇದ್ದರು.ತಬಲಾ ಅನಿಲ ಮೇತ್ರಿ ಹಾಗೂ ಹಾರ್ಮೋನಿಯಂ ಪರಶುರಾಮಕಟ್ಟಿಸಂಗಾವಿ ಸಾಥ್ ನೀಡಿದರು.
ಕ.ವಿ.ವ. ಸಂಘದ ಸಹ ಕಾರ್ಯದರ್ಶಿ ಶಂಕರ ಕುಂಬಿ ಸ್ವಾಗತಿಸಿದರು.ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣಒಡ್ಡೀನ ನಿರೂಪಿಸಿದರು.ಕೋಶಾಧ್ಯಕ್ಷ ಶಿವಾನಂದ ಭಾವಿಕಟ್ಟಿ ಸನ್ಮಾನ ಪತ್ರಓದಿದರು.ಕಾರ್ಯಕಾರಿ ಸಮಿತಿ ಸದಸ್ಯಗುರು ಹಿರೇಮಠ ಪರಿಚಯಿಸಿದರು.ಕೊನೆಯಲ್ಲಡಾ.ಧನವಂತ ಹಾಜವಗೋಳ ವಂದಿಸಿದರು.
ಕಾರ್ಯಕ್ರಮದಲ್ಲಿಅರವಿಂದ ಯಾಳಗಿ, ಅರುಣಕುಲಕರ್ಣಿ, ಡಾ.ಎಸ್.ಆರ್.ರಾಮನಗೌಡರ, ಡಾ.ಬಾಳಪ್ಪಾ ಚಿನಗುಡಿ, ಬಾಳೂಪಂಥ ಕುಲಕರ್ಣಿ, ಬಸವರಾಜಗಾರ್ಗಿ, ಶಿರೀಷ ಜೋಶಿಯವರ ಕುಟುಂಬದವರು, ಅಭಿಮಾನಿಗಳು ಭಾಗವಹಿಸಿದ್ದರು.