
ಹುಣಸಗಿ : ಮಾ.10: ವಿಧಾನಸಭೆ ಚುನಾವಣೆಗೆ ಬಿಜೆಪಿ ರಂಗ ತಾಲೀಮು ತೀವ್ರಗೊಳಿಸಿದೆ. ತಳಮಟ್ಟದಲ್ಲೇ ಮತದಾರರ ಬೇಟೆಗೆ ಹಲವು ಅಭಿಯಾನಗಳನ್ನು ಹಮ್ಮಿಕೊಂಡಿದೆ. ಈ ಪೈಕಿ ವಿಜಯ ಸಂಕಲ್ಪ ಅಭಿಯಾನ ಮಹತ್ವದ್ದಾಗಿದೆ.
ಏನಿದು ವಿಜಯ ಸಂಕಲ್ಪ ಅಭಿಯಾನ?
ತಳಮಟ್ಟದಲ್ಲಿ ಪಕ್ಷ ಸಂಘಟನೆ, ಮತದಾರರ ಗಮನ ಸೆಳೆಯಲು ಬಿಜೆಪಿ ಈ ಅಭಿಯಾನವನ್ನು ಹಮ್ಮಿಕೊಂಡಿದೆ. ಮನೆ ಮನೆಗೆ ಪಕ್ಷದ ಕಾರ್ಯಕರ್ತರು ತೆರಳಿ ಸರ್ಕಾರದ ಸಾಧನೆಯ ಬಗ್ಗೆ ಜನರಿಗೆ ಮಾಹಿತಿ ನೀಡಲಿದ್ದಾರೆ. ಇದಕ್ಕಾಗಿ ಕರಪತ್ರಗಳನ್ನು ಹಂಚಲಿದ್ದಾರೆ. ಈ ಮೂಲಕ ಬಿಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರದ ಸಾಧನೆಗಳನ್ನು ಜನತೆಗೆ ತಲುಪಿಸಲಿದ್ದಾರೆ.
ಹುಣಸಗಿ ಪಟ್ಟಣಕ್ಕೆ ಆಗಮಿಸಿದ ವಿಜಯ ಸಂಕಲ್ಪ ಯಾತ್ರೆಯು ಮಹಾಂತಸ್ವಾಮೀ ವೃತ್ತದಿಂದ, ಪ್ರಾರಂಭಗೊಂಡು ವಾಲ್ಮೀಕಿ ಚೆನ್ನಮ್ಮ ವೃತ್ತ, ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್ ವೃತ್ತಗಳ ಮಾರ್ಗವಾಗಿ ಬಸವೇಶ್ವರ ವೃತ್ತ ತಲುಪಿತು. ನಂತರ ಸಾರ್ವಜನಿಕ ಸಭೆ ಮಾಡಲಾಯಿತು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ,ಟಿ,ರವಿ, ರಾಜ್ಯ ಸಚಿವರಾದ ಶ್ರೀ ರಾಮಲು, ಸ್ಥಳೀಯ ಶಾಸಕ ರಾಜೂಗೌಡ, ಸಂಸದ ಅಮರೇಶ ನಾಯಕ, ಬಿ ಜಿ ಪಾಟೀಲ್, ಮಾಲೀಕಯ್ಯ ಗುತ್ತೇದಾರ, ಅಮರನಾಥ ಪಾಟೀಲ್, ಡಾ ಎಸ್ ಪಿ ದಯಾನಂದ, ಸಿದ್ದರಾಜು ಮಾರುತೀರಾವ್, ದೇವೇಂದ್ರನಾಥ ನಾದ್, ಶಶಿಕಲಾ ಟೆಂಗಳಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಶರಣಭೂಪಲ್ ರೆಡ್ಡಿ, ಗುರು ಕಾಮಾ, ವಿರೇಶ್ ಬಿ ಚಿಂಚೋಳಿ, ಬಿ ಎಮ್ ಅಳ್ಳಿಕೋಟಿ, ಬಸವರಾಜ ಸ್ಥಾವರಮಠ, ಡಾ ವೀರಭದ್ರಗೌಡ ಹೊಸಮನಿ ಮೇಲಪ್ಪ ಗುಳುಗಿ ಭಾಗಿಯಾಗಿದ್ದರು. ಡಿಕೆಶಿಗೆ ಟಾಂಗ್ ಕೊಟ್ಟ ರಾಮುಲು ಬೇಲ್ ಮೇಲೆ ಹೊರಗಿರುವ ಡಿಕೆ ಶಿವಕುಮಾರ್ ಗೆ ಬಿಜೆಪಿ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುವ ನೈತಿಕತೆ ಇಲ್ಲ ಎಂದರು.
ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಸಚಿವ ಶ್ರೀ ರಾಮಲು ಸುರಪೂರ ಮತಕ್ಷೇತ್ರದಲ್ಲಿ ಕಾರ್ಯಕರ್ತರ ಹುಮ್ಮಸ್ಸು ಬಹಳ ಸಂತೋಷ ತಂದಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ ರಾಜೂಗೌಡ ಅವರು 40 ಸಾವಿರಕ್ಕು ಅತ್ಯಂತ ಹೆಚ್ಚು ಮತದಿಂದ ಗೆಲ್ಲಿಸಬೇಕು. ಕಾಂಗ್ರೆಸ್ ನಾಯಕರು ಹಾಗೂ ಡಿ.ಕೆ ಶಿವಕುಮಾರ್ ಬಿಜೆಪಿ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಮ್ಮ ಮುಖ್ಯಮಂತ್ರಿಗಳ ಮನೆಯ ಮುಂದೆ ಧರಣಿ ಮಾಡುವ ನೀವು ಬೇಲ್ ಮೇಲೆ ಹೊರಗಿದ್ದೀರಿ ಹೀಗಾಗಿ ನೀವು ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುವ ಯಾವ ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿ , ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ಸ್ಪಷ್ಟಬಹುಮತದಿಂದ 140 ಸ್ಥಾನ ಗೆಲ್ಲುವುದು ಖಚಿತ ಹಾಗೂ ಸುರಪುರದಲ್ಲೂ ಸಹ ಕಮಲ ಅರಳುವುದು ಖಚಿತ, ಬಿಜೆಪಿ ಸರ್ಕಾರದ ಉತ್ತಮ ಕಾರ್ಯ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಡಳಿತ ಮೆಚ್ಚಿ ದಿನೇ ದಿನೇ ಅನೇಕ ಮುಖಂಡರು ಬಿಜೆಪಿ ಸೇರ್ಪಡೆಗೊಳ್ಳುತ್ತಿರುವುದು ಸಂತೋಷದ ಸಂಗತಿ ಹಾಗೂ ಕಾರ್ಯಕರ್ತರೆ ನಮ್ಮ ಪಕ್ಷದ ಜೀವಾಳ ಎಂದರು.
ರಸ್ತೆ ಉದ್ದಕ್ಕೂ ಜನಸಾಗರ ಕಾರ್ಯಕರ್ತರ ಜೈ ಬಿಜೆಪಿ, ಜೈ ಮೋದಿ, ಜೈ ರಾಜೂಗೌಡ ಜಯಘೋಷ
ರಾಜ್ಯದಲ್ಲಿ, ಅದು ಕೂಡ ಸುರಪೂರ ಮತಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದು ಖಚಿತ – ಜಗದೀಶ್ ಶೆಟ್ಟರ್
ಕೇಂದ್ರ ಮತ್ತು ನಮ್ಮ ಸರ್ಕಾರದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಲು ಕಾಂಗ್ರೆಸ್ಗೆ ನೈತಿಕತೆ ರಾಮುಲು
ಸುಮಾರು 15000 ಕಾರ್ಯಕರ್ತರು ಯಾತ್ರೆಯಲ್ಲಿ ಭಾಗಿ