ಪ್ರತಿಭಾ ಪುರಸ್ಕಾರ

(ಸಂಜೆವಾಣಿ ವಾರ್ತೆ)
ನವಲಗುಂದ,ಆ 14: ಪಂಚಮಸಾಲಿ ಸಮಾಜಕ್ಕೆ ಜಾತಿಭೇದವಿಲ್ಲ ವಿದ್ಯಾರ್ಥಿಗಳು ಸಮಾಜದ ಸಾಧಕರ ಸಾಧನೆ ಅರಿತು ಅವರಂತೆ ಸಾಧಕರಾಗಿ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ಶ್ರೀ ಗವಿಮಠದ ಸಿದ್ದಲಿಂಗೇಶ್ವರ ದಾಸೋಹ ಭವನದಲ್ಲಿ ನಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಅವರು ಸಮಾಜದ ಯಾವುದೇ ಮಕ್ಕಳು ಶಿಕ್ಷಣವಂಚಿತರಾಗಬೇಡಿ ಎಂದರು.
ನಂತರ ಜವಳಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಾತನಾಡಿ ಪ್ರತಿಭೆ ಎನ್ನುವುದು ಒಬ್ಬರಿಗೆ ಮಾತ್ರ ಸೀಮಿತವಲ್ಲ ಹೀಗಾಗಿ ನಮ್ಮ ಸಮಾಜದ ಮಕ್ಕಳು ಉಳಿದ ಸಮಾಜದಂತೆ ನಮ್ಮ ಮಕ್ಕಳಿಗೂ ಮೀಸಲಾತಿ ಅನಿವಾರ್ಯವಾಗಿದೆ. ಮೂಲತ ಕೃಷಿಕ ಸಮಾಜದವರು ನಾವು ನಮ್ಮ ಮಕ್ಕಳಾದರೂ ಬೇರೆ ಬೇರೆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡ್ಬೇಕಾಗಿದೆ. ಸಮಾಜದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಇನ್ನು ಹೆಚ್ಚಿನ ರೀತಿಯಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಪೆÇ್ರೀತ್ಸಾಹ ನೀಡುವುದು ಮುಖ್ಯವಾಗಿದೆ ಹಾಗೇ ನವಲಗುಂದ ತಾಲೂಕಿನ ಸಮಾಜದ ಅಭಿವೃದ್ಧಿಗಾಗಿ ತನುಮನಧನ ನೀಡಲು ಸಿದ್ದನಿದ್ದೇನೆ ಎಂದು ಹೇಳಿದರು.
ಕೆಪಿಸಿಸಿ ಸದ್ಯಸರಾದ ವಿಜಯ ಕುಲಕರ್ಣಿ ಮಾತನಾಡಿ ಭವಿಷ್ಯದಲ್ಲಿ ಪಂಚಮಸಾಲಿ ಸಮಾಜ ಮುಂಚಣಿಯಲ್ಲಿ ಬರಬೇಕಾದರೆ ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಬೇಕಾಗಿದೆ. ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇದೆ ಎಂದರು ಹಾಗೂ ಲಿಂಗಾಯತ ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳಿಗೆ ರಾಜ ಫೌಂಡೇಶನ್ ವತಿಯಿಂದ ಕೆಎಎಸ್ ಮುಂಚುಣಿ ಪರೀಕ್ಷೆ ಪಾಸಾದವರಿಗೆ ಧನ ಸಹಾಯ ಮಾಡಲಾಗುವುದು ಎಂದು ಹೇಳಿದರು.
ಇದಕ್ಕೂ ಮೊದಲು ಕುಂದಗೋಳ ಶಾಸಕ ಎಮ್. ಆರ್. ಪಾಟೀಲ ಸಸಿಗೆ ನೀರುವುಣ್ಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗವಿಮಠದ ಬಸವಲಿಂಗಶ್ರೀಗಳಿಂದ ಆಶೀರ್ವಚನ ನೀಡಿದರು ಹಾಗೂ ಬಾಪುಗೌಡ್ರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು
ಮಾಜಿ ಶಾಸಕ ಡಾ. ಆರ್. ಬಿ. ಶಿರಿಯಣ್ಣವರ, ಎಲ್. ಬಿ. ಪಾಟೀಲ, ಸದುಗೌಡ ಪಾಟೀಲ, ಶ್ರೀಮತಿ ವಿಜಯಲಕ್ಷ್ಮೀ ಪಾಟೀಲ, ಶ್ರೀಮತಿ ಶಾಂತಾದೇವಿ ನಿಡವಣಿ, ಮಲ್ಲಪ್ಪ ಕಿರೇಸೂರು, ಗುರುಪ್ರಸಾದ ಪಾಟೀಲ, ನಾಗನಗೌಡ ಪಾಟೀಲ, ಎಮ್. ಎಸ್. ಕೊಪ್ಪದ, ವಾಯ್. ಬಿ. ಕುರಹಟ್ಟಿ, ಎಸ್. ವಿ. ಮುದಿಗೌಡ್ರ ಹಾಗೂ ತಾಲೂಕಿನ ಸಮಸ್ತ ಲಿಂಗಾಯತ ಪಂಚಮಸಾಲಿ ಸಮಾಜದ ಬಂಧುಗಳು ಹಾಜರಿದ್ದರು.