ಪ್ರತಿಭಾ ಪುರಸ್ಕಾರ ಕಾರ್ಯಕ್ರಮ


ಹುಬ್ಬಳ್ಳಿ, ಜೂ 5: ಜಂಗಮ ಕ್ಷೇಮಾಭಿವೃದ್ಧಿ ಸೇವಾ ಸಮಿತಿ (ರಿ) ವತಿಯಿಂದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ನಗರದ ಹಳೇಹುಬ್ಬಳ್ಳಿಯ ಮಲ್ಲಿಕಾ ಹಾಲ್‍ನಲ್ಲಿ ಹಮ್ಮಿಕೊಳ್ಳಲಾಯಿತು.
ಹಿರಿಯ ವಕೀಲರಾದ ಎಸ್.ಕೆ. ಕಾಯಕಮಠ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಶಿವಕುಮಾರ ಹಿರೇಮಠ, ಅಧ್ಯಕ್ಷರಾದ ನಾಗರಾಜ ಹಿರೇಮಠ, ಉಪಾಧ್ಯಕ್ಷರಾದ ಶೇಖಣ್ಣ ಕಳ್ಳಿಮಠ, ಗೌರವಾಧ್ಯಕ್ಷರಾದ ಚಿಕ್ಮಮಠ, ಚಂದ್ರು ಖರ್ಜಿಗಿಮಠ, ವಿರಯ್ಯಸ್ವಾಮಿ ಸಾಲಿಮಠ, ಪ್ರಕಾಶ್ ಕುಲಕರ್ಣಿ, ಗಂಗಾಧರ್ ಗೊಟಗೋಡಿಮಠ್, ರಾಜು ಕೊರೆಣಮಠ, ಮಾಲತೇಶ ಗಿರಿಮಠ, ಅಜಯ ಹಿರೇಮಠ, ನಿರ್ಮಲ ಹಿರೇಮಠ, ಅಡವಯ್ಯ ಬಿಚ್ಚುಗತ್ತಿಮಠ, ನಿಲವ್ವಾ ಎತ್ತಿನಮಠ, ಬಸವರಾಜ ಹಡಗಲಿಮಠ, ಬಸಯ್ಯ ಚಿಕ್ಕಮಠ ಮತ್ತಿತರರು ಉಪಸ್ಥಿತರಿದ್ದರು.