
ಕಲಬುರಗಿ,ಸೆ 14: ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಲಬುರಗಿಯ ಕರುಣೇಶ್ವರ ನಗರದ ವಿವೇಕಾನಂದ ವಿದ್ಯಾನಿಕೇತನ ಶಾಲೆಯ ಮಕ್ಕಳು ಅತಿ ಹೆಚ್ಚು ಬಹುಮಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಆಯೋಜಿತ ಒಟ್ಟು 37 ಸ್ಪರ್ಧೆಗಳ ಪೈಕಿ ವಿವೇಕಾನಂದ ವಿದ್ಯಾ ನಿಕೇತನ
ಶಾಲೆಯ ವಿದ್ಯಾರ್ಥಿಗಳು ವೈಯಕ್ತಿಕ ಸಾಧನೆಯ ಮೂಲಕ 24 ಪ್ರಥಮ
ಬಹುಮಾನ, 10 ದ್ವಿತೀಯ ಹಾಗೂ ಐದು ತೃತೀಯ ಸ್ಥಾನದ ಬಹುಮಾನಗಳನ್ನು ಪಡೆದು ಶಾಲೆಯ ಗೌರವ ಹೆಚ್ಚಿಸಿದ್ದಾರೆ.
ಪ್ರಥಮ ಬಹುಮಾನ: ಒಂದರಿಂದ ನಾಲ್ಕನೇ ತರಗತಿ ವಿಭಾಗದಲ್ಲಿ ಅನನ್ಯ ವೀರೇಶ್(ಕನ್ನಡ ಕಂಠಪಾಠ), ಚೇತನಾ ಮಲ್ಲಿಕಾರ್ಜುನ (ಇಂಗ್ಲಿಷ್ ಕಂಠಪಾಠ), ಸುಬೋಧಸಂದೀಪ (ಸಂಸ್ಕøತ ಧಾರ್ಮಿಕ ಪಠಣ), ಸಂಗಮೇಶ ಶರಣಬಸಪ್ಪ (ಛದ್ಮವೇಷ)ವೈಷ್ಣವಿ ಗುರುರಾಜ (ಕಥೆ ವಾಚನ) ಅನ್ವಿತಾ ರವಿಕುಮಾರ (ಅಭಿನಯ ಗೀತೆ),ಪ್ರಿಯಾ ಗಂಗಾರಾಮ (ಕ್ಲೇ ಮಾಡಲಿಂಗ್) ಹಾಗೂ ಅನನ್ಯ ರಾಘವೇಂದ್ರ (ಭಕ್ತಿಗೀತೆ)ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಗಳನ್ನು ಪಡೆದಿದ್ದಾರೆ.ಐದರಿಂದ ಏಳನೇ ತರಗತಿ: ಸಂಜನಾ ಅಶೋಕ (ಇಂಗ್ಲಿಷ್ ಕಂಠಪಾಠ), ಬದರಿನಾಥವಿಠಲ ( ಸಂಸ್ಕøತ ಧಾರ್ಮಿಕ ಪಠಣ) ಅಬೂಬ್ಕರ್ ಸಿದ್ದಿಕಿ ಆಸಿಮ್ ಇಕ್ಬಾಲ್ (ಅರೇಬಿಕ್ ಧಾರ್ಮಿಕ
ಪಠಣ) ಪ್ರೇರಣಾ ರುದ್ರಪ್ಪ (ಲಘು ಸಂಗೀತ ಪ್ರಸ್ತುತಿ) ಕೀರ್ತಿ ಶಿವಪುತ್ರಪ್ಪ
(ಚಿತ್ರಕಲೆ ಮತ್ತು ಬಣ್ಣ ಹಚ್ಚುವಿಕೆ), ಕಾಂಚನಗಂಗಾ (ಅಭಿನಯ ಗೀತೆ), ವೈಷ್ಣವಿಬಾಲಾಜಿ (ಕ್ಲೇ ಮಾಡಲಿಂಗ್) ಹಾಗೂ ಸಾಯಿಪ್ರಸಾದ್ ಮಹೇಶ್ ಕುಲಕರ್ಣಿ (ಆಶು ಭಾಷಣ)ವಿಭಾಗದಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ.
ಎಂಟರಿಂದÀ 10ನೇ ತರಗತಿ: ಸೂರ್ಯಮಿತ್ರ ಬುದ್ದೇಶ್ (ಇಂಗ್ಲಿಷ್ ಭಾಷಣ),ಸುದೇಷ್ಣ ವಿಠಲ (ಸಂಸ್ಕøತ ಧಾರ್ಮಿಕ ಪಠಣ), ಮಹ್ಮದ್ ಜಯೀದ್ (ಅರೇಬಿಕ್ ಧಾರ್ಮಿಕಪಠಣ), ನಿವೇದಿತಾ ಪ್ರಭಾಕರ (ಜಾನಪದ ಗೀತೆ ಗಾಯನ), ವನ್ಯ ಶಿವರಾಜ ಗೊಬ್ಬೂರ್(ಭರತನಾಟ್ಯ), ಪುನೀತ್ ಸಂತೋಷ್ (ಛದ್ಮವೇಷ), ಈಶ್ವರಿ ಸಿದ್ಧರಾಮ (ಗಝಲ್ಗಾಯನ) ಹಾಗೂ ಅರ್ಪಿತಾ ಮತ್ತು ತಂಡ (ಖವ್ವಾಲಿ ಪ್ರಸ್ತುತಿ) ಸ್ಪರ್ಧೆಯಲ್ಲಿಪ್ರಥಮ ಸ್ಥಾನ ಪಡೆದು ವಿಜೇತರಾಗಿದ್ದಾರೆ.ಒಂದರಿಂದ ನಾಲ್ಕನೇ ತರಗತಿಯ ವಿಭಾಗದಲ್ಲಿ ದ್ವಿತೀಯ ಬಹುಮಾನಪಡೆದವರು: ಅನನ್ಯ ರಾಘವೇಂದ್ರ (ಲಘು ಸಂಗೀತ).
ಐದರಿಂದ ಏಳನೇ ತರಗತಿ: ಸಾಗರ ರೇವಣಸಿದ್ದಪ್ಪ (ಹಿಂದಿ ಕಂಠಪಾಠ),
ಗುರುರಾಜ ಕಲ್ಲಪ್ಪ (ಕವನ ವಾಚನ),ಎಂಟರಿಂದ 10ನೇ ತರಗತಿ: ಲಕ್ಷ್ಮಿ ಕಲ್ಲಪ್ಪ (ಕನ್ನಡ ಭಾಷಣ), ವಿದ್ಯಾಶ್ರೀ ಶರಣಬಸಪ್ಪ(ಚಿತ್ರಕಲೆ ಮತ್ತು ಬಣ್ಣ ಹಚ್ಚುವಿಕೆ), ದಾನೇಶ್ವರಿ ಸಿದ್ದಪ್ಪ (ಆಶು ಭಾಷಣ), ಪವನ್(ಕವನ ವಾಚನ), ಶ್ರೇಯಸ್ ಜಿ.ವಿ. ಮತ್ತು ಶ್ರೇಯಸ್ ಎಸ್.ಎಂ. (ರಸಪ್ರಶ್ನೆ) ಹಾಗೂ
ಮಲ್ಲಿಕಾ ಮತ್ತು ತಂಡ (ಜಾನಪದ ನೃತ್ಯ),ತೃತೀಯ ಬಹುಮಾನ : ಭೂಮಿಕಾ ದತ್ತಾತ್ರಿ (ಹಿಂದಿ ಭಾಷಣ), ನಿವೇದಿತಾ ಪ್ರಭಾಕರ್(ಭಾವಗೀತೆ), ಸಚಿನ್ ಶಿವಾನಂದ (ಮಿಮಿಕ್ರಿ), ಅಭಿಷೇಕ್ ರಮೇಶ್ (ಚರ್ಚಾ ಸ್ಪರ್ಧೆ) ಹಾಗೂ
ತೇಜಶ್ರೀ ಕಾಶಿನಾಥ (ರಂಗೋಲಿ) ಬಹುಮಾನ ಪಡೆದಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಪ್ರಾಂಶುಪಾಲ ಸಿದ್ದಪ್ಪ ಭಗವತಿ, ಅಧ್ಯಕ್ಷೆ ಸುವರ್ಣ ಎಸ್.ಭಗವತಿ ಹಾಗೂ ಮುಖ್ಯಗುರು ಅಂಬಿಕಾ ರೆಡ್ಡಿ ಹಾಗೂ ಶಿಕ್ಷಕವೃಂದದವರು ಹರ್ಷ ವ್ಯಕ್ತಪಡಿಸಿದ್ದಾರೆ.