ಪ್ರಜಾಪ್ರಭುತ್ವ ಉಳಿವಿಗಾಗಿ ಕಾಂಗ್ರೆಸ ಪಕ್ಷವನ್ನು ಬೆಂಬಲಿಸಿ:ಖರ್ಗೆ

ಸೈದಾಪುರ:ಮಾ.26:ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಂಡಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು.

ಪಟ್ಟಣದ ವಾರದ ಲೆಔಟದಲ್ಲಿ ಹಮ್ಮಿಕೊಂಡ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಛೇರಿ ಅಡಿಗಲ್ಲು ಸಮಾರಂಭ ಹಾಗೂ ಬೃಹತ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ಕಲ್ಯಾಣ ಕರ್ನಾಟದ ಅಭಿವೃದ್ಧಿಗಾಗಿ 371ನೇ ಕಲಾಂ ಅಸ್ಥಿತ್ವಕ್ಕೆ ತಂದು ಈ ಭಾಗದ ಶೈಕ್ಷಣಿಕ ಹಾಗೂ ಉದ್ಯೋಗಕ್ಕೆ ಮಹತ್ವದ ಕೊಡುಗೆ ಪಕ್ಷ ನೀಡಿದೆ. ಬಡವರ ಏಳಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿ ದೇಶದ ಎಲ್ಲಾ ವರ್ಗಕ್ಕೂ ಮಹತ್ವ ನೀಡುವ ಪಕ್ಷ ನಮ್ಮದ್ದಾಗಿದ್ದೂ ಇದನ್ನು ಚುನಾವಣಾ ಸಂದರ್ಭದಲ್ಲಿ ಪ್ರತಿಯೊಬ್ಬರು ಪರಿಗಣಿಸಬೇಕು ಎಂದು ಹೇಳಿದರು. ಗುರುಮಠಕಲ್ ನನಗೆ ರಾಜಕೀಯ ಸಾಧನೆಗೆ ನೆರವು ನೀಡಿದ ಕ್ಷೇತ್ರವಾಗಿದೆ. ಶಾಸಕನಾಗಿ, ಸಂಸದನಾಗಿ ರಸ್ತೆ, ನೀರು, ವಿದ್ಯುತ್ ಸೇರಿದಂತೆ ಸಾಷಕ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಮೊದಲು ನಾನು ಇಲ್ಲಿಗೆ ಬಂದಾಗ ಇಲ್ಲಿನ ಮುಖಂಡರು ಹಾಗೂ ಜನ ತೋರಿದ ಪ್ರೀತಿ ವಿಶ್ವಾಸದಿಂದ ಅಧಿಕಾರ ಮಾಡುವಂತಾಯಿತು ಎಂದು ಕಾರ್ಯಕರ್ತರ ಹೆಸರಗಳು ಹೇಳುತ್ತಾ ಹಿಂದಿನ ನೆನಪುಗಳನ್ನು ಬಿಚ್ಚಿಟ್ಟರು. ಪಕ್ಷಕ್ಕೆ ಪ್ರತಿಯೊಬ್ಬರು ನಿಷ್ಠೆಯಿಂದ ಕೆಲಸ ಮಾಡಬೇಕು. ಅಧಿಕಾರ ಸಿಗದ್ದಾಗಿ ಪಕ್ಷಾಂತಾರ ಮಾಡ ಕೂಡದು ನಾನು ಪಕ್ಷಕ್ಕೆ ತೋರಿದ ನಿಷ್ಠೆಯಿಂದ ರಾಷ್ಟ್ರೀಯ ನಾಯಕನಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಪುನ ಸೇರಿದ ಬಾಬುರಾವ ಚಿಂಚನಸೂರಗೆ ಎಚ್ಚರಿಗೆ ನೀಡಿದರು.

ರಾಜ್ಯಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿ, ಈ ಭಾಗ ಕಾಂಗ್ರೆಸ್ ಪಕ್ಷಕ್ಕೆ ಮಹತ್ವದ್ದಾಗಿದೆ. ಖರ್ಗೆಯವರಿಗೆ ರಾಜಕೀಯ ನೆಲೆ ನೀಡಿದ ಪ್ರದೇಶ ಇದಾಗಿದ್ದೂ. ಅವರು ರಾಷ್ಟ್ರ ನಾಯಕರಾಗಿ ದೇಶದಲ್ಲಿ ಇರುವುದು ನಿಮಗೆ ಹೆಮ್ಮೆ ತರುವಂತದ್ದಾಗಿದ್ದೂ ಅವರ ಮಾರ್ಗದರ್ಶನದಲ್ಲಿ ನಾವು ಕಾರ್ಯನಿರ್ವಹಿಸೋಣ. ಪಕ್ಷ ನೀಡುವ ಅಭ್ಯರ್ಥಿಗೆ ತಾವು ಬೆಂಬಲಿಸಿ ಅಧಿಕಾರಕ್ಕೆ ತರುವಂತಾಗಬೇಕು ಎಂದು ಮನವಿ ಮಾತನಾಡಿದರು.

ಮಾಜಿ ಸಚಿವ ಬಾಬುರಾವ ಚಿಂಸನಸೂರ ಮಾತನಾಡಿ, ಖರ್ಗೆಯವರು ನನ್ನ ರಾಜಕೀಯ ಗುರುವಾಗಿದ್ದಾರೆ. ಕಲ್ಯಾಣ ಕರ್ನಾಟಕ ಮುಸ್ಸದ್ದಿ ರಾಜಕಾರಣಿಯಾಗಿದ್ದೂ ಅವರ ಮಾರ್ಗದರ್ಶನಲ್ಲಿ ನಾನು ಸಾಗುತ್ತೇನೆ. ರಾಜ್ಯದ ಕಾಂಗ್ರೆಸ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಸಲಹೆಯೊಂದಿಗೆ ಕಾರ್ಯನಿರ್ವಹಿಸುತ್ತೇನೆ. ಕಾಂಗ್ರೆಸ್ ಬಡವರ ಪಕ್ಷವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಎಐಸಿಸಿ ಕಾರ್ಯದರ್ಶಿ ಶ್ರೀಧರ ಬಾಬು, ಶಾಸಕರಾದ ಶರಣಬಸ್ಸಪ್ಪ ದರ್ಶನಾಪೂರ, ರಾಜಾ ವೆಂಕಟಪ್ಪ ನಾಯಕ, ಚೆನ್ನಾರಡ್ಡಿ ಪಾಟೀಲ ತುನ್ನೂರು, ಹಂಪನಗೌಡ ಬಾದರ್ಲಿ, ಡೇವಿಡ್ ಸಿಮಿಯೋನ, ಖನಿಜಾ ಫಾತಿಮಾ, ಶರಣಪ್ಪ ಮಟ್ಟೂರು, ಹಿರಿಯ ಮುಖಂಡರಾದ ಜಿ.ನಾರಯಣರಾವ, ಚಿದಾನಂದಪ್ಪ ಕಾಳೆಬೆಳಗುಂದಿ, ಶರಣಿಕುಮಾರ ದೋಖಾ, ಜಿಲ್ಲಾಧ್ಯಕ್ಷ ಬಸರೆಡ್ಡಿ ಪಾಟೀಲ ಅನಪೂರ, ಮಹಿಪಾಲರೆಡ್ಡಿ ದುಪ್ಪಲ್ಲಿ, ಚಂದ್ರಶೇಖರ ವಾರದ, ಕೃಷ್ಣಾ ಚಪ್ಪೆಟ್ಲಾ, ನಿರಂಜನರೆಡ್ಡಿ ಶೆಟ್ಟಹಳ್ಳಿ, ಡಾ.ಭೀಮಣ್ಣ ಮೇಟಿ, ಡಾ.ಎಸ್.ಬಿ.ಕಾಮರಡ್ಡಿ, ಸುದರ್ಶನ ನಾಯಕ, ವಿಶ್ವನಾಥ ನೀಲಹಳ್ಳಿ, ಮಹಿಪಾಲರೆಡ್ಡಿ ಹತ್ತಿಕುಣಿ, ವಿಜಯ ಕಂದಳ್ಳಿ, ಮಲ್ಲಮ್ಮ ಕೋಮರ ಸೇರಿದಂತೆ ಇತರರಿದ್ದರು.