ಚಿಂಚೋಳಿ,ಜೂ.6- ತಾಲೂಕಿನ ಪೆÇೀಲಕಪಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಈ ಎರಡು ಸ್ಥಾನಗಳಿಗೆ ಅರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಗಳು ಹಾಗೂ ಚಿಂಚೋಳಿ ತಹಸೀಲ್ದಾರ್ ವಿರೇಶ್ ಅವರು ತಿಳಿಸಿದರು.
ನೂತನ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಶ್ಯಾಮಲಾತ ಚೆನ್ನಬಸವ, ಉಪಾಧ್ಯಕ್ಷರಾಗಿ ಸುವರ್ಣ ಜಗನಾಥ್ ಅವರು ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಜಗನ್ನಾಥ್ ಕಟ್ಟಿ, ಶಿವರಾಜ್ ಪಾಟೀಲ್, ವಿಜಯಕುಮಾರ್ ಘಾಟಕೆ, ಸುರೇಶ್ ದೇಶಪಾಂಡೆ, ಗೋವಿಂದ ರಾಠೋಡ್, ಜಾಕಿರ್ ಸಾಬ್ , ರಾಜಶೇಖರ್, ಹನಮಂತ ಕೊಡದೂರ, ಮತ್ತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಇದ್ದರು.