
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.06: ಜಿಲ್ಲೆಯ ಸಿರುಗುಪ್ಪ ನಗರದ ಆಶೀರ್ವಾದ ಐರಣಿ ಅವರು ಪೂರ್ಣಾಭಿಷೇಕ ಪಡೆದು ಲಲಿತಾನಂದನಾಥನಾಗಿದ್ದಾರೆ.
ಶ್ರೀಗುರು ಸನ್ನಿಧಾನದಲ್ಲಿ ತಮಿಳುನಾಡಿನ ಚೆನ್ನೈ ನಗರದ 40ಕ್ಕೂ ಹೆಚ್ಚು ಪಂಡಿತರ ಹಾಗೂ ಉಪಾಸಕರುಗಳ ಸಮ್ಮುಖದಲ್ಲಿ ಶ್ರೀಗಗನಾಂಬಿಕಾ ಸಹಿತ ಶ್ರೀಗಗನಾನಂದನಾಥ ಶ್ರೀಗುರುಗಳಿಂದ ಪೂರ್ಣಾಭಿಷೇಕ ಪಡೆದರು.
ತನ್ನ ಹತ್ತನೇ ವಯಸ್ಸಿನಲ್ಲಿ ವೇದಾಧ್ಯಯನದಲ್ಲಿ ಆಸಕ್ತಿ ಮೂಡಿಸಿಕೊಂಡು ಕನಕಪುರ ಬಳಿಯ ಓಂ ಶಾಂತಿಧಾಮ ವೇದ ಗುರುಕುಲದಲ್ಲಿ ಶಿಕ್ಷಣಾರ್ಥಿಯಾದರು. ರಾಜ್ಯ ಸರ್ಕಾರಿ ಪಠ್ಯಕ್ರಮದ ಜೊತೆಗೆ ವೇದಧ್ಯಾಯನ ಮಾಡಿದರು. ಇದಕ್ಕೂ ಮೊದಲೇ ಶ್ರೀ ಯೋಗಾತ್ಮಾನಂದರಿಂದ ಬಾಲಪಾಠ ಪಡೆದಿದ್ದ ಕಾರಣ ಕಲಿಕೆ ಸುಗಮವಾಗಿತ್ತು
ಗುರುಕುಲದಲ್ಲಿನ ಗುರುಮಾತೆ ಲಕ್ಷ್ಮಾಂಬಾ ಇವರಿಂದ ಬ್ರಹ್ಮವಿದ್ಯಾದೀಕ್ಷೆ ಮತ್ತು ಯೋಗದರ್ಶನ, ಉಪನಿಷತ್ ಹಾಗೂ ಸಂಖ್ಯಾಶಾಸ್ತ್ರ ಅಧ್ಯಯನ ಮಾಡಿದರು.
ಪದವಿ ಪೂರ್ವ ಶಿಕ್ಷಣಕ್ಕಾಗಿ ಮೈಸೂರು ನಗರದಲ್ಲಿ ಉನ್ನತ ಶಿಕ್ಷಣ ಜೊತೆಗೆ ಸಾಮವೇದ ಅದ್ಯಯನ ಮಾಡತ್ತಾ ಹೀಲಿಂಗನ್ನೂ ಅಧ್ಯಯನ ಮಾಡುತ್ತಾ ಪದವಿಧರರಾಗುತ್ತಾರೆ
ಇವರು ಸಿರುಗುಪ್ಪ ನಗರದ
ಪತ್ರಕರ್ತ ರಾಜೀವ ಐರಣಿ ಇವರ ಪುತ್ರರಾಗಿದ್ದಾರೆ.
ಇವರನ್ನು ಅನೇಕ ಉಪಾಸಕರು ವಿದ್ವಾಂಸರುಗಳು ಮುಕ್ತ ಕಂಠದಿಂದ ಶ್ಲಾಘಿಸಿದ್ದು ಕಿರಿಯ ವಯಸ್ಸಿನಲ್ಲಿ ಇಂಥಹ ಸಾಧನೆ ಮಾಡಿದ ಇವರು ಇನ್ನು ಹೆಚ್ಚಿನ ಕೊಡುಗೆಗಳನ್ನು ಲೋಕಕ್ಕೆ ನೀಡಲಿ ಎಂದು ಆಶೀರ್ವಾದಿಸಿದ್ದಾರೆ.