ಬಸವನಬಾಗೇವಾಡಿ:ಸೆ.26: ಪುರಾಣ-ಪ್ರವಚನದಿಂದ ಮನಸ್ಸು ಪರಿಶುದ್ಧವಾಗುತ್ತದೆ ಎಂದು ಸಕ್ಕರೆ, ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ಇಂಟರ್ ನ್ಯಾಷನಲ್ ಸ್ಕೂಲ್ (ಸಿಬಿಎಸ್ಸಿ) ಆವರಣದಲ್ಲಿ ಹಾನಗಲ್ಲ ಕುಮಾರ ಮಹಾಸ್ವಾಮೀಜಿಯವರ 156ನೇ ಜಯಂತ್ಯೋತ್ಸವದ ನಿಮಿತ್ತ ಜೀವನ ದರ್ಶನ ಪ್ರವಚನ ಕಾರ್ಯಕ್ರಮಲ್ಲಿ ಮಾತನಾಡಿದ ಅವರು ಶ್ರೀಕುಮಾರ ಶಿವಯೋಗಿಗಳು ಸಮಾಜಕ್ಕೆ ಅಪಾರ ಕೊಡುಗೆಯನ್ನ ನೀಡಿದ್ದಾರೆ ಅಂತಹ ಮಹಾನ್ ಪುರುಷರ ಕುರಿತು ನಡೆದಿರುವ ಪ್ರವಚನವು ಮನಸ್ಸನ್ನು ಗೆಲ್ಲುವಂತ ಪ್ರವಚನ ಇದಾಗಿದೆ ಹೆಚ್ಚು ಹೆಚ್ಚು ಜನರು ಪ್ರವಚನವನ್ನು ಆಲಿಸಿ ಮನುಸ್ಸನ್ನು ಪಾವನಗೊಳಿಸಿಕೊಳ್ಳಬೇಕು, ಕೆಲವು ಕಡೆಗಳಲ್ಲಿ ಗುರು-ವಿರಕ್ತರಲ್ಲಿ ಭೇದ-ಭಾವವಿರುತ್ತದೆ ಆದರೆ ಬಸವನಬಾಗೇವಾಡಿಯಲ್ಲಿ ಇಲ್ಲ ಎಂದು ಹೇಳಿದರು.
ಹುಬ್ಬಳ್ಳಿ-ಹಾನಗಲ್ ಮೂರುಸಾವಿರಮಠದ ಮಹಾರಾಜ ನಿರಂಜನ ಜಗದ್ಗುರು ಡಾ.ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ ಮಾತನಾಡಿ ಹಾನಗಲ್ಲ ಕುಮಾರೇಶ ಶಿವಯೋಗಿಗಳು ಸಮಾಜ ಸೇವೆಯಲ್ಲಿ ಬಹುದೊಡ್ಡ ಕೂಡುಗೆ ನೀಡಿದ್ದರು, ಅವರ ಬದುಕೇ ಒಂದು ವ್ಯಾಖ್ಯಾನು, ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ ಸಂತರ, ಶರಣರ, ಮಹಾನ್ ಪುರುಷರ ಜೀವನಾದರ್ಶಗಳು ಇತಿಹಾಸದಲ್ಲಿ ಉಳಿದುಕೊಳ್ಳುತ್ತವೆ, ಉದ್ಧಾತ ಚಿಂತನೆ ಮಾಡಿದಂತಹ ಮಹಾನ್ ವೀರಾಗಿ ಯುಗಪುರುಷ ಶ್ರೀಕುಮಾರೇಶ ದೇಶದಲ್ಲಿಯೇ ಒಬ್ಬನೇ, ತಾಯಿ ಒಪ್ಪಿಗೆಕೊಟ್ಟಾಗ ಮಾತ್ರ ಸನ್ಯಾಸಿ ಆಗಲು ಸಾಧ್ಯ, ಇತಂಹ ಮಹಾನ್ ಯುಗಪುರಷನ ಜಯಂತಿ ಮಾಡುತ್ತಿರುವುದು ಸಂತಸ ಕೆಲಸ ಎಂದು ಹೇಳಿದರು.
ಪ್ರವಚನಕಾರ ಉಪ್ಪಿನ ಬೇಟಗೇರಿಯ ಮೂರುಸಾವಿರ ವಿರಕ್ತಮಠದ ಕುಮಾರ ವಿರುಪಾಕ್ಷ ಸ್ವಾಮೀಜಿ ಪ್ರವಚನ ನುಡಿ ನೀಡಿ ಮಾತನಾಡಿದ ಅವರು ಪುಣ್ಯದಿಂದಲೇ ಎಲ್ಲವೂ ಪ್ರಾಪ್ತಿ ಇಡೀ ಸಮಾಜದ ಪುಣ್ಯದ ಕಾರ್ಯ ಮಾಡುವ ಕೆಲಸ ಸಿಕ್ಕಿತು ಶ್ರೀಕುಮಾರೇಶ ಶ್ರೀಗಳು 2ನೇ ಬಸವಣ್ಣನ್ನಾಗಿ ಸಮಾಜಕ್ಕಾಗಿ ದುಡಿದರು, ಉಪವಾಸ ವಾನಸ ಮಾಡಿ ಸಮಾಜವನ್ನು ಶ್ರೀಮಂತಗೊಳಿಸಿದರು ಎಂದು ಹೇಳಿದರು.
ಬಿಳೂರು ವಿರಕ್ತಮಠದ ಮುರುಘೇಂದ್ರ ಮಹಾಸ್ವಾಮೀಜಿ ಪ್ರವಚನವನ್ನು ಉದ್ಘಾಟಿಸಿ ಮಾತನಾಡಿದರು. ಶಾಸಕ ಭೀಮನಗೌಡ(ರಾಜುಗೌಡ) ಪಾಟೀಲ, ಚನ್ನಬಸವ ಸ್ವಾಮೀಜಿ, ಸಿದ್ಧರಾಮ ಸ್ವಾಮೀಜಿ, ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಸುರೇಶ ಹಾರಿವಾಳ, ಬಿ.ಕೆ.ಕಲ್ಲೂರ, ಭರತ ಅಗರವಾಲ, ಶೇಖರ ಗೊಳಸಂಗಿ, ಸಂಗನಗೌಡ ಚಿಕ್ಕೊಂಡ, ಬಸವರಾಜ ಹಾರಿವಾಳ, ವಿಜಯಪುರ ಜಿಲ್ಲಾ ಮಠಾಧೀಶರ ಒಕ್ಕೂಟದ ಸರ್ವ ಪೂಜ್ಯರು ಇದ್ದರು. ಕು.ಸ್ಪೂರ್ತಿ ತುಪ್ಪದ, ಕು.ಸೌಭಾಗ್ಯ ಗೋಡೆಕರ ಭರತ ನಾಟ್ಯ ಪ್ರದರ್ಶಿಸಿದರು. ಗುರುಪಾದೇಶ್ವರ ಶಿವಾಚಾರ್ಯರು ಸ್ವಾಗತಿಸಿದರು, ಶಿಕ್ಷಕ ಎಚ್.ಬಿ.ಬಾರಿಕಾಯಿ ನಿರೂಪಿಸಿದರು, ಎಸ್.ಪಿ.ಮಡಿಕೇಶ್ವರ ವಂದಿಸಿದರು.