
ಕಲಬುರಗಿ:ಎ.22: ಪವಿತ್ರ ರಂಜಾನ ಹಬ್ಬವು ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹಾನುಭೂತಿಯ ಮನೋಭಾವವನ್ನು ಹೆಚ್ಚಿಸಲಿ. ಪ್ರತಿಯೊಬ್ಬರಲ್ಲಿಯೂ ಆರೋಗ್ಯ ಮತ್ತು ಶಾಂತಿ ಲಭಿಸಲಿ ಎಂದು ಕಸಾಪ ಉತ್ತರದ ಅಧ್ಯಕ್ಷ ಶ್ರೀ ಪ್ರಭುಲಿಂಗ ಮುಲಗೆ ಹೇಳಿದರು.
ಇಂದು ಕನ್ನಡ ಸಾಹಿತ್ಯ ಪರಿಷತ್ ಉತ್ತರ ವಲಯದಿಂದ ಆಯೋಜಿಸಿದ್ದ ರಂಜಾನ ಹಬ್ಬದ ಪ್ರಯುಕ್ತ ನಡೆದ ಸಮಾರಂಭದಲ್ಲಿ ಕಸಾಪ ಉತ್ತರ ವಲಯ ಸಂಚಾಲಕರು ಮತ್ತು ಅತ್ಯಂತ ಸರಳ ವಿನಯಶೀಲರಾಗಿರುವ ಶ್ರೀ ನವಾಬ್ ಖಾನ್ ಇವರ ಮನೆಯಲ್ಲಿ ಅವರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.
ಇದು ಇಸ್ಲಾಮಿಕ್ ಸಮುದಾಯದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ.ಇಸ್ಲಾಮಿಕ್ ಚಂದ್ರನ ಕ್ಯಾಲೆಂಡರ್ ನ10 ನೇ ತಿಂಗಳಾದ ಶವ್ವಾಲ್ನ ಮೊದಲ ದಿನದಂದು ಈದ್ ಅನ್ನು ಆಚರಿ ಸಲಾಗುತ್ತದೆ.ಈದ್ನ ದಿನಾಂಕವನ್ನು ಚಂದ್ರನ ದರ್ಶನದಿಂದ ನಿರ್ಧರಿಸ¯ Áಗುತ್ತದೆ. ಚಂದ್ರ ಗೋಚರಿಸುವ ದಿನವನ್ನು ಚಾಂದ್ ಮುಬಾರಕ್ ಎಂದು ಕರೆಯಲಾಗುತ್ತದೆ. ಒಂದು ತಿಂಗಳ ಕಾಲ ರೋಜಾ ಇದ್ದು ಎಲ್ಲರ ಒಳಿತಿಗಾಗಿ ಪ್ರಾರ್ಥಿಸಿ ಅತ್ಯಂತ ಪವಿತ್ರವಾಗಿ ಆಚರಿಸುವ ರಂಜಾನ ಹಬ್ಬವು ನವಾಬ್ ಖಾನರನ್ನು ರಂಜಾನ್ ಎಲ್ಲರ ಬಾಳಲ್ಲಿ ಶಾಂತಿ ಸಮೃದ್ಧಿ ಜೊತೆಗೆ ನೆಮ್ಮದಿಯ ಬದುಕು ನೀಡಲಿ ಎಂದು ಹೇಳಿದರು.
ಪ್ರೀತಿ ಮತ್ತು ಸಹಾನುಭೂತಿಯ ಹಬ್ಬವಾದ ಈದ್ ನಮಗೆ ಇತರರಿಗೆ ಸಹಾಯ ಮಾಡುವ ಸಂದೇಶ ನೀಡುತ್ತದೆ., ಈ ಶುಭ ಸಂದರ್ಭದಲ್ಲಿ ಆಚರಣೆಯ, ಸಮಾಜದಲ್ಲಿ ಸಹೋದರತ್ವವನ್ನು ಉತ್ತೇಜಿಸಲು ಎಲ್ಲರೂ ಒಟ್ಟಾಗಿ ಪ್ರತಿಜ್ಞೆ ಮಾಡೋಣ ಎಂದು ನುಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ. ಶ್ರೀ ಕೆ ಬಸವರಾಜ್ ನಿವೃತ್ತ ಮುಖ್ಯ ಗುರುಗಳ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ ಉತ್ತರ ವಲಯ ಕೇವಲ ಸಾಹಿತ್ಯಕವಾಗಿರದೆ ಭಾವೈಕ್ಯತೆ ಸಮ್ಮೇಳನ ರಂಜಾನ್ ಕಾರ್ಯಕ್ರಮ ಮುಂತಾದ ಕಾರ್ಯಕ್ರಮ ಮಾಡುವ ಮುಖಾಂತರ ಭಾವೈಕ್ಯತೆ ಮೂಡಿಸುವಂತಹ ಕೆಲಸ ಉತ್ತರ ವಲಯ ಮಾಡುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಕಾರ್ಯದರ್ಶಿಗಳಾದ ನಾಗೇಶ್ ತಿಮ್ಮಾಜಿ ನಿರೂಪಿಸಿದರು. ಸ್ವಾಗತವನ್ನು ಹಣಮಂತ್ರಾಯ ದಿಂಡೂರೆÀ ಕಾರ್ಯದರ್ಶಿಗಳು ಉತ್ತರ ವಲಯ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಚಂದ್ರಕಾಂತ್ ಬಿರಾದರ್, ನಿವೃತ್ತ ಸೈನಿಕರಾದ ರೇಣುಕಾಚಾರ್ಯ ಸ್ಥಾವರಮಠ ಭಾಗವಹಿಸಿದರು. ರವಿ ಹೂಗಾರ ಶಿಕ್ಷಕರು ಹಾಗೂ ರವಿ ಬಿರಜಾದಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಗೌರವಕೋಶದ ಅಧ್ಯಕ್ಷರಾದ ಶ್ರೀಕಾಂತ್ ಪಾಟೀಲ್ ದಿಕ್ಸಂಗಿ ವಂದಿಸಿದರು.