ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಈರಣ್ಣ ಅರಿಕೇರಿ

ಶಹಾಪುರ :ಜೂ.7: ಪ್ರತಿ ಶಾಲೆಯಲ್ಲೂ ಗಿಡಗಳನ್ನು ನೆಡುವ ಮೂಲಕ ಪರಿಸರ ಕಾಳಜಿ ಜತೆಗೆ ಮಕ್ಕಳಿಗೆ ಮರಗಿಡಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಈರಣ್ಣ ಅರಿಕೇರಿ ಹೇಳಿದರು.

ಅತ್ಯವಶ್ಯ. ಪರಿಸರ ದಿನಾಚರಣೆ ಕೇವಲ ಸಸಿಗಳನ್ನು ನಡುವ ಕಾರ್ಯಕ್ಕೆ ಸೀಮಿತವಾಗಿದೆ ವರ್ಷದ 365 ದಿನಗಳು ಮರಗಿಡಗಳನ್ನು ಬೆಳೆಸುವ ಮತ್ತು ಶಿಕ್ಷಕರು ಉಳಿಸುವ ಕಾರ್ಯದಲ್ಲಿ ತೊಡಗಿಸ ಕೊಳ್ಳಬೇಕು. ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಪ್ರತಿ ತಿಂಗಳು ಸಸಿಗಳನ್ನು ನೆಡುವಂತೆ ಮನವಿ ಮಾಡಿದರು.

ವಿಶ್ವಪರಿಸರ ದಿನಾಚರಣೆ ಅಂಗವಾಗಿ ನಗರದ ಹೃದಯ ಭಾಗದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ದೊರಿಗುಡ್ಡ (ಉಕ್ಕಿನಾಳ) ಸ್ಕೂಲ್‍ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆಯಲ್ಲಿ ಮರಗಿಡಗಳು ಕಾಪಾಡುವುದು ಅತ್ಯವಶ್ಯಕವಾಗಿದೆ ಮಕ್ಕಳಿಗೆ ಪರಿಸರ ಪ್ರೇಮದ ಬಗ್ಗೆ ವಿಶೇಷವಾಗಿ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕನ ಜೀವನ ಪ್ರೇರಣೆ ಮಕ್ಕಳಿಗೆ ನೀಡಬೇಕು ಎಂದು ಸಲಹೆ ನೀಡಿದರು.

ನಂತರ ಪ್ರತಿ ತಿಂಗಳಿಗೊಮ್ಮೆ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಪ್ರಬಂಧ ಸ್ಪರ್ಧೆ ನಡೆಸುವಂತೆ ಶಿಕ್ಷಕರಿಗೆ ಹೇಳಿದರು ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಭಾಗ್ಯಮ್ಮ ಪಾಟೀಲ್, ಸುಭಾಷ್ ನಾಯಕ,ನಿಲಯ ಪಾಲಕರಾದ ಶ್ರೀ ಸಂತೋಷ್ ಜೋಗುರ, ಸಂಗೀತ ಶಿಕ್ಷಕರಾದ ರಮೇಶ ಶಂಕರ್ ಹಳ್ಳೂರ, ಹೂಗಾರ, ಬಸವರಾಜ ನಾಯಕ, ಚಿತ್ರ ಕಲೆ ಶಿಕ್ಷಕರಾದ ದತ್ತು ಸರ್, ಚಂದ್ರು ರಾಠೋಡ, ಪ್ರಥಮ ದರ್ಜೆ ಸಹಾಯಕರು ಹಾಜರಿದ್ದರು