ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.05: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಪಶ್ಚಿಮ ಬಿಇಓ ನಯೀಮ್  ರಹಮಾನ್‌ ಹೇಳಿದ್ದಾರೆ
ಅವರು ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲೂಕಿನ ರಾಯಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಹಸಿರೆ ಉಸಿರು, ಮನೆಗೊಂದು ಮರ ಊರಿಗೊಂದು ವನ, ಸಮುದಾಯದ ಸಹಯೋಗದಲ್ಲಿ ಶಾಲೆಯ ಮೈದಾನದಲ್ಲಿ ಹಸಿರು ಗಿಡಗಳಿಂದ ಕಂಗೊಳಿಸುವಂತೆ ಕ್ರಮವಹಿಸಲು  ತಿಳಿಸಿ.ಉತ್ತಮ ಪರಿಸರದಿಂದ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷ, ಪಿಡಿಓ, ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ,  ಸದಸ್ಯರು,  ಸಿ.ಆರ್.ಪಿ ವೃಷಬೇಂದ್ರ, ಮತ್ತು ಶೇಕನ್ ಬಿ  ಮುಖ್ಯ ಗುರುಗಳು , ಸಿಬ್ಬಂದಿ ವರ್ಗದವರು ಸೇರಿಕೊಂಡು  ಶಾಲಾ ಆವರಣದಲ್ಲಿ ಸಸಿ ನೆಟ್ಟು ನೀರು ಹಾಕಿದರು.
ಶಿಕ್ಷಕ ಮಹೇಶ್ ಕಾರ್ಯಕ್ರಮ  ನಿರ್ವಹಣೆ ಮಾಡಿದರು.