ಪರಿಸರ ಗಣೇಶ ಪ್ರತಿಷ್ಠಾಪನೆ ನಮ್ಮೆಲ್ಲರ ಹೊಣೆ: ಪ್ರೇಮಾನಂದ ಬಿರಾದಾರ

(ಸಂಜೆವಾಣಿ ವಾರ್ತೆ)
ವಿಜಯಪುರ: ಸೆ.11:ಪರಿಸರ ಗಣೇಶ ಪ್ರತಿಷ್ಠಾಪನೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಅಭಿಪ್ರಾಯ ವ್ಯಕ್ತಪಡಿಸಿದರು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಹಾಗು ನಗರ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ವಿಜಯಪುರ ಆಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಶನಿವಾರ ರಂದು ನಡೆದ ಪರಿಸರ ಗಣೇಶ ಉತ್ಸವ ಆಚರಣೆ ಕುರಿತು ಚಿಂತನ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡುತ್ತಾ ಗಣಪತಿ ಸ್ಥಾಪನೆ ಮಣ್ಣಿನಿಂದ ತಯಾರಿಸಿ ಮಣ್ಣಿಗೆ ಹೊಗುವಂತಹ ಪರಿಸರ ಪ್ರೇಮ ಬೆಳೆಸಿಕೊಳ್ಳೋಣ.ಗಣಪತಿಯ ವಿಸಜ9ನೆಯಿಂದ ಜಲಮಾಲಿನ್ಯ ವಾಗದಂತೆ ಸಾವ9ಜನಿಕರು ಎಚ್ಚರಿಕೆ ವಹಿಸಬೇಕೆಂದರು.
ಪರಿಸರ ಗಣೇಶ ಉತ್ಸವ ಆಚರಣೆ ಕುರಿತು ಉಪನ್ಯಾಸ ನೀಡಿದ ಡಾ : ಮಾಧವ ಗುಡಿ ಮಾತನಾಡಿ ಪಿಒಪಿ ಬಳಕೆಯಂತಹ ರಸಾಯನಿಕ ಗಣಪತಿಗಳ ಬದಲಾಗಿ ಮಣ್ಣಿನ ಗಣಪತಿ ಪ್ರತಿಷ್ಠಾಪಿಸಬೇಕು. ಜೊತೆಗೆ ಪ್ಲಾಸ್ಟಿಕ ಮುಕ್ತ ಗಣಪತಿ ಸಿದ್ದತೆ ಮಾಡಿಕೊಳ್ಳಬೇಕು. ಗಣಪತಿ ವಿಸಜ9ನೆಯಿಂದ ನದಿಗಳಲ್ಲಿರುವ ಜಲಚರ ಪ್ರಾಣಿಗಳು ಜೀವಹಾನಿಯಾಗದಂತೆ ಮುನ್ನಚ್ಚರಿಕೆ ವಹಿಸಬೇಕು. ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಪರಿಸರ ಗಣೇಶ ಮೂರ್ತಿ ಪ್ರತಿಯೊಬ್ಬರು ಸ್ಥಾಪಿಸಬೇಕು .ಪರಿಸರ ಸಂರಕ್ಷಣೆಯ ನಮ್ಮೆಲ್ಲರ ಜವಾಬ್ದಾರಿ ಎಂದರು .
ಮುಖ್ಯ ಅತಿಥಿಗಳಾದ ವಿಶ್ರಾಂತ ಪ್ರಾಚಾರ್ಯ ವಿಧ್ಯಾದರ ಸಾಲಿ ಮಾತನಾಡಿ ನಾವು ವಾಸಿಸುತ್ತಿರುವ ಬಡಾವಣೆಯಲ್ಲಿ ಮರಗಳನ್ನು ಬೆಳೆಸುವ ಜೊತೆಗೆ ಅಥ9ಪೂಣ9ವಾದ ಗಣೇಶ ಉತ್ಸವ ಆಚರಿಸೋಣ ಎಂದರು
ಸಿದ್ದೇಶ್ವರ ಕಲಾ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಪಿ ಎಸ್ ಕಡೆಮನಿ ಮಾತನಾಡಿ ಗಣಪತಿ ನಿಮಿ9ಸುತ್ತಿರುವ ಕಲಾವಿದರು ಪರಿಸರ ಪ್ರೇಮಿ ಗಣಪತಿಗಳನ್ನು ಸಿದ್ದಪಡಿಸಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕೆಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ನಿಕಟಪೂವ9 ನಗರ ಕಸಾಪ ಅಧ್ಯಕ್ಷೆ ಶ್ರೀದೇವಿ ಉತ್ಲಾಸರ ಮಾತನಾಡಿ ಡಿಜಿ ಶಬ್ದ ಮಾಲಿನ್ಯ ಮಾಡದೆ ಗಣೇಶನ ಹಬ್ಬ ಪರಿಸರ ಸ್ನೇಹಿಯಾಗಿ ಸಂಸ್ಕøತಿಯ ಪ್ರತೀಕವಾಗಲಿ. ಗಣಪತಿ ಸುಲಭವಾಗಿ ಕರಗಿ ಹೋಗುವಂತೆ ವಿಸಜ9ನೆ ಮಾಡುವಂತಿರಬೇಕು. ನಿವೃತ್ತ ಸಿ ಪಿ ಆಯ್ ಸಿ ಬಿ ಬಾಗೇವಾಡಿ ಬಸವರಾಜ ರೆಬಿನಾಳ ಅಂಬಾದಾಸ ಜೋಶಿ ಅಣ್ಣಾರಾಯಗೌಡ ಬಿರಾದಾರ ಮಾತನಾಡಿದರು
ರವಿ ಕಿತ್ತೂರ ಮಹೆತಾಬ ಕಾಗವಾಡ ಶಾಂತಾ ವಿಭೂತಿ ಪರಿಸರ ಜಾಗೃತಿ ಗೀತೆ ಹಾಡಿ ಸಭೆಯ ಗಮನ ಸೆಳೆದರು ಸುರೇಶ ಜತ್ತಿ ನಿರೂಪಿಸಿದರು ಡಾ : ಆನಂದ ಕುಲಕರ್ಣಿ ವಂದಿಸಿದರು ಸರೋಜಿನಿ ಬಾಗೇವಾಡಿ ಹಾಸಿಂಪೀರ ವಾಲಿಕಾರ ಅಭಿಷೇಕ ಚಕ್ರವರ್ತಿ ರಾಜೇಸಾಬ ಶಿವನಗುತ್ತಿ ವಿದ್ಯಾವತಿ ಅಂಕಲಗಿ ಸತ್ಯಪ್ಪ ಹಡಪದ ಕೆ ಎಪ್ ಅಂಕಲಗಿ ವಿಶ್ವನಾಥ ಕುಲಕರ್ಣಿ ಯು ಎನ್ ಕುಂಟೋಜಿ ವಿಜಯಲಕ್ಷ್ಮೀ ಹಳಕಟ್ಟಿ ಆಶಾ ಬಿರಾದಾರ ಅಜು9ನ ಶಿರೂರ ಬಸನಗೌಡ ಬಿರಾದಾರ ನಾಗರಾಜ ಹೊಸಳ್ಳಿ ಎಂ ಎ ಬಕ್ಷಿ ಶೋಭಾ ಹರಿಜನ ಎ ಎಲ್ ಹಳ್ಳೂರ ಮಹಾದೇವಿ ತೇಲಗಿ ಡಿ ಎಸ್ ಕೋನರಡ್ಡಿ ಎ ಎಚ್ ಕರಜಗಿ ಸಿದ್ದಾಮಪ್ಪ ಜಂಗಮಶೆಟ್ಟಿ ರವಿ ಕುಲಕರ್ಣಿ ಚಂದ್ರು ಚೌಧರಿ ಸಲೀಮ ವಾಲೀಕಾರ ರಾಜು ಅಂಗಡಿ ಮುಂತಾದವರು ಉಪಸ್ಥಿತರಿದ್ದರು.