
ಲಕ್ಷ್ಮೇಶ್ವರ,ಮಾ.28: ಪಟ್ಟಣದ ವಕೀಲರ ಸಂಘದವರು ಶನಿವಾರ ಅಧ್ಯಕ್ಷ ಜೆ.ಡಿ.ದೊಡ್ಡಮನಿ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ 2023-24 ಮತ್ತು 2024-25 ನೇ ಸಾಲಿನ ಅವಧಿಗೆ ನೂತನ ಪದಾಧಿಕಾರಿಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಬಸವರಾಜ ಶಿ.ಬಾಳೇಶ್ವರಮಠ ಅವರು ಆಯ್ಕೆಯಾಗಿದ್ದು ಉಳಿದಂತೆ ಪದಾಧಿಕಾರಿಗಳು ಇಂತಿದ್ದಾರೆ.
ಅನಂತ ಟಿ.ಕಟ್ಟಿಮನಿ (ಉಪಾಧ್ಯಕ್ಷ), ವಿಠ್ಠಲ್ ಕೆ.ನಾಯಕ್ ( ಪ್ರಧಾನ ಕಾರ್ಯದರ್ಶಿ), ಎನ್.ಸಿ.ಅಮಾಸಿ ( ಖಜಾಂಚಿ), ಮೃತ್ಯುಂಜಯ ಪಿ.ಯಲವಿಗಿ (ಗ್ರಂಥ ಪಾಲಕ), ಉಮಾ ಬಳ್ಳಾರಿ ( ಸಹ ಕಾರ್ಯದರ್ಶಿ), ಬಿ.ವ್ಹಿ.ಪಾಟೀಲ ( ಸಹ ಗ್ರಂಥಪಾಲಕರು) ಎಂದು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಹಿರಿಯ ವಕೀಲರು ಹಾಜರಿದ್ದರು.