(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ : ಇಲ್ಲಿನ ನಗರ ಪಾಲಿಕೆಯ ಮೇಯರ್ ಆಗಿ ತ್ರಿವೇಣಿ ಸೂರಿ ಮತ್ತು ಉಪ ಮೇಯರ್ ಆಗಿ ಬಿ.ಜಾನಕಿ ಅವರು ಇಂದು ಪದಗ್ರಹಣ ಮಾಡಿದರು.
ಕಳೆದ ಮಾರ್ಚ್ ತಿಂಗಳಲ್ಲಿ ಇವರ ಆಯ್ಕೆಯಾಗಿದ್ದರೂ, ತಕ್ಷಣ ವಿಧಾನ ಸಭಾ ಚುನಾವಣೆ ಘೋಷಣೆ ಆಗಿದ್ದರಿಂದ ನೀತಿ ಸಂಹಿತಿಈ ಹಿನ್ನಲೆಯಲ್ಲಿ ಅಧಿಕಾರದ ಒದಗ್ರಹಣ ಮಾಡಿರಲಿಲ್ಲ.
ನೀತಿ ಸಂಹಿತಿ ಮುಗಿದು 20 ದಿನಗಳ ಬಳಿಕ ಇಂದು ಅವರು ಪದಗ್ರಹಣ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಚಿವ ನಾಗೇಂದ್ರ, ಸೇರಿದಂತೆ ಪಾಲಿಕೆ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.