ಜಗಳೂರು.ಮೇ.೩೦ :- ತಾಲೂಕಿನಲ್ಲಿ ಪತ್ರಕರ್ತರ ಸಂಘದ ಕ್ಷೇಮಾಭಿವೃದ್ದಿಗೆ ಸದಾ ಸಿದ್ದನಾಗಿರುವೆ. ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಪತ್ರಕರ್ತರ ಕಟ್ಟಡ ನಿರ್ಮಾಣಕ್ಕೆ ಶಾಸಕರ ನಿಧಿಯಡಿ ಹೆಚ್ಚಿನ ಅನುಧಾನ ನೀಡಿ ಪೂರ್ಣಗೊಳಿ ಸುವೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಭರವಸೆ ನೀಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿoದ ಸನ್ಮಾನ ಸ್ವೀಕರಿಸಿ, ನಂತರ ಪತ್ರಕರ್ತರ ಭವನ ಕಟ್ಟಡ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು.ಕ್ಷೇತ್ರದ ಅಭಿವೃದ್ದಿಯೇ ನನ್ನ ಮಂತ್ರ. ಯಾವುದೇ ಫಲಾಪೇಕ್ಷೆ ನಿರೀಕ್ಷೆಯಿಲ್ಲ. ಪತ್ರಕರ್ತರ ಸಲಹೆ, ಸಹಕಾರ ಅಗತ್ಯ. ನಾನು ಜನ ಸೇವಕನಾಗಿ ಸೇವೆಗೈಯುವೆ. ಅಲ್ಲದೆ ಶಾಶ್ವತ ನೀರಾವರಿ ಯೋಜ ನೆಗಳ ಕಾಮಗಾರಿ ಪೂರ್ಣಗೊಳಿಸಲು ಶ್ರಮಿಸುವೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಸಾಬೀತುಪಡಿಸಿ ಮುಖ್ಯಮಂತ್ರಿ ಸಿದ್ದ ರಾಮಯ್ಯನವರ ನೇತೃತ್ವದಲ್ಲಿ ಸಚಿವ ಸಂಪುಟ ರಚನೆಯಾಗಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದೆ.ಈ ಅವಧಿಯಲ್ಲಿ ನಾನು ಶಾಸಕನಾಗಿ ಆಯ್ಕೆಯಾಗಿರುವುದು ನನ್ನ ಭಾಗ್ಯ ಇದರಿಂದ ಕ್ಷೇತ್ರ ದ ಅಭಿವೃದ್ದಿ ಪರ್ವಕ್ಕೆ ನಾಂದಿಯಾಗಲಿದೆ ಎಂದು ಮನದಾಳದ ಮಾತು ವ್ಯಕ್ತಪಡಿಸಿದರು.ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್. ಚಿದಾನಂದ ನೂತನ ಶಾಸಕರಿಗೆ ಪತ್ರಕರ್ತರ ಸಂಘದಿoದ ಕೃತ ಜ್ಞತೆ ಸಲ್ಲಿಸಿ ಮಾತನಾಡಿದ ಅವರು ಕ್ಷೇತ್ರದ ಅಭಿವೃದ್ಧಿ ನಮ್ಮ ಎಲ್ಲಾ ಪತ್ರಕರ್ತರ ಸಹಕಾರ ಸಲಹೆಗಳು ನೀಡಲಿದೆ. ಪತ್ರಕರ್ತರ ಸಮಸ್ಯೆ ಗಳಿದ್ದು, ನಿವೇಶನಗಳನ್ನು ನೀಡಬೇಕು. ಪಟ್ಟಣದಲ್ಲಿ ಪತ್ರಕರ್ತರ ಭವನದ ಕಟ್ಟಡದ ಕಾಮಗಾರಿ ನಡೆಯುತ್ತಿದೆ. ಶಾಸಕರ ಅನುಧಾ ನದಡಿ ಹೆಚ್ಚಿನ ಅನುಧಾನ ನೀಡಿ ಕಾಮಗಾರಿ ಪೂರ್ಣಗೊಳಿಸು ವಂತೆ ಮನವಿ ಮಾಡಿದರು. ಎಸ್.ವಿ.ರಾಮಚಂದ್ರ ಶಂಕುಸಾಪನೆ ನೆರವೇರಿಸಿ 10 ಲಕ್ಷ ರೂ. ಅನುಧಾನ ನೀಡಿದ್ದಾರೆ. ಈಗ ಉಳಿದ ಕಾಮಗಾರಿಗೆ ನೂತನ ಶಾಸಕರಾದ ಬಿ.ದೇವೇಂದ್ರಪ್ಪರವರು ಅನುಧಾನ ಬಿಡುಗಡೆ ಮಾಡುವ ಮೂಲಕ ನೂತನ ಶಾಸಕರಿಂದ ಲೇ ಉದ್ಘಾಟನೆ ಭಾಗ್ಯ ದೊರಯಲಿದೆ ಎಂದು ವಿಶ್ವಾಸವ್ಯಕ್ತ ಪಡಿಸಿದರು.