
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.18: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಅಂಚೆ ಇಲಾಖೆಯಿಂದ ನೀಡುವ ವಿಮಾ ಸೌಲಭ್ಯದ ಕಾರ್ಡುಗಳನ್ನು ನಿನ್ನೆ ನಗರದ ಪತ್ರಿಕಾ ಭವನದಲ್ಲಿ ವಿತರಿಸಲಾಯಿತು.
ಅಂಚೆ ಇಲಾಖೆ ಸಿಬ್ಬಂದಿ ಎಸ್ ಅವರು ಸಂಘದ ಸದಸ್ಯ ಪತ್ರಕರ್ತರ ಮಾಹಿತಿ ಪಡೆದು ಆನ್ ಲೈನ್ ಮೂಲಕ ವಿಮೆ ಸೌಲಭ್ಯವನ್ನು ಕಲ್ಪಿಸಿದರು.
ಈ ಸಂದರ್ಭದಲ್ಲಿ ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯಪ್ಪ, ಕಾನಿಪ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಯಾಳ್ಪಿ ವಲಿಭಾಷಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ರವಿ, ಮೊದಲಾದವರು ಇದ್ದರು.