ನ್ಯಾಷನಲ್ ಕಬಡ್ಡಿ ಪಂದ್ಯಕ್ಕೆ ಆಯ್ಕೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ :ಏ.11ತಾಲೂಕಿನ ಉಪನಾಯಕನಹಳ್ಳಿ ಗ್ರಾಮದ ಸಿ. ಎಚ್. ಅಭಿಷೇಕ್ ಮೇ 5ರಂದು ನೇಪಾಳದಲ್ಲಿ ನಡೆಯುವ ನ್ಯಾಷನಲ್ ಕಬ್ಬಡಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾನೆ.
ಏಪ್ರಿಲ್ 6 ಮತ್ತು 7ರಂದು ಚಿಕ್ಕಮಂಗಳೂರಿನಲ್ಲಿ ನ್ಯಾಷನಲ್ ಯೂತ್ ಸ್ಪೋರ್ಟ್ಸ್ ಅಂಡ್ ಎಜುಕೇಶನ್ ಫೌಂಡೇಶನ್ ವತಿಯಿಂದ ನಡೆದ ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಉತ್ತಮ ಆಟ ಆಡಿ ತಂಡದ ಗೆಲುವಿನ ರೂವಾರಿಯಾಗಿರುವುದನ್ನು ಗಮನಿಸಿ ಮೇ 1ರಿಂದ 5ರವರೆಗೆ ನೇಪಾಳದಲ್ಲಿ ನಡೆಯುವ ನ್ಯಾಷನಲ್ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಆಟ ಆಡಲು ಅಭಿಷೇಕ್ ಆಯ್ಕೆಯಾಗಿದ್ದಾನೆ ಈ ಆಯ್ಕೆಯ ಬಗ್ಗೆ ಉಪನಾಯಕನಹಳ್ಳಿ ಗ್ರಾಮದ ಗ್ರಾಮಸ್ಥರು ಅಭಿನಂದಿಸಿದ್ದಾರೆ