ನೌಕರರ ಮುಷ್ಕರಕ್ಕೆ ಬೆಂಬಲಿಸಲು ಕರಪತ್ರ ಹಂಚಿಕೆ

ದೇವದುರ್ಗ,ಫೆ.೨೮-
ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮತ್ತು ಹಳೆ ಪಿಂಚಣಿಯ ಯೋಜನೆ ಜಾರಿಗೆ ಆಗ್ರಹಿಸಿ ಮಾ.೧ರಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲಿಸುವಂತೆ ಕೋರಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ವಿವಿಧ ಇಲಾಖೆಗಳಿಗೆ ತೆರಳಿ ಕರಪತ್ರ ಅಂಟಿಸುವ ಮೂಲಕ ಸೋಮವಾರ ಅಭಿಯಾನನಡೆಸಿತು.
ತಾಲೂಕು ಅಧ್ಯಕ್ಷ ಹನುಮಂತ್ರಾಯ ಶಾಖೆ ಕರಪತ್ರ ಅಂಟಿಸುವ ಅಭಿಯಾನಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿ, ಮಾ.೧ರಿಂದ ಕೆಲಸ ಬಹಿಷ್ಕರಿಸಿ ಮುಷ್ಕರ ನಡೆಸಲಾಗುತ್ತಿದ್ದು, ಎಲ್ಲ್ಲ ಇಲಾಖೆಗಳಿಗೆ ಕರಪತ್ರ ಅಂಟಿಸುವ ಮೂಲಕ ಮುಷ್ಕರಕ್ಕೆ ಬೆಂಬಲಿಸಲು ಮನವಿ ಮಾಡಲಾಗುತ್ತಿದೆ. ಸರ್ಕಾರ ಆಯವ್ಯಯದಲ್ಲಿ ಸರ್ಕಾರಿ ನೌಕರರ ವೇತನ, ಭತ್ಯೆ ಪರಿಷ್ಕರಣೆಗೆ ಸಂಬಂಧಿಸಿದಂತೆ ಪ್ರಸ್ತಾಪ ಮಾಡದಿರುವುದು ಖಂಡನೀಯ.
ಕೂಡಲೇ ೭ನೇ ವೇತನ ಆಯೋಗದಿಂದ ಮಧ್ಯಂತರ ವರದಿಯನ್ನು ಪಡೆದು, ಚುನಾವಣೆ ನೀತಿ ಸಂಹಿತೆ ಜಾರಿಗೆ ಮೊದಲು ಶೇ.೪೦ ಫಿಟ್‌ಮೆಂಟ್ ಸೌಲಭ್ಯ ೨೦೨೨ರ ಜುಲೈ ೧ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಬೇಕು. ಎನ್.ಪಿ.ಎಸ್. ಯೋಜನೆ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಪರಿಷತ್ ಸದಸ್ಯ ಶಿವಲಿಂಗಯ್ಯ, ಖಜಾಂಚಿ ಬಸವರಾಜ ಹೊನೂರ್, ವಿರೂಪನಗೌಡ ನಾಗಡದಿನ್ನಿ, ಶಿವಪುತ್ರಪ್ಪ, ಶರಣಬಸವ, ಪ್ರಭುರಾಜ್, ಅಭಿ?ಕ ರೆಡ್ಡಿ, ಮೈಬೂಬ್‌ಅಲಿ, ಶಿವಕುಮಾರ, ಶಾಂತಗೌಡ, ಮಹಾದೇವ ಪಾಟೀಲ್ ಚೆನ್ನಾರೆಡ್ಡಿ ಗಣದಿನ್ನಿ, ಗಂಗಾಧರ್ ಮಂದಕಲ್, ಬಸವರಾಜ್ ಮಸರಕಲ್, ಬಸವರಾಜ ಪಾಟೀಲ್ ಇತರರಿದ್ದರು.