ಕಲಬುರಗಿ:ಮಾ.24: ಯಾವುದೇ ಜೀವಿಯು ಜನಿಸಿ, ಬೆಳವಣಿಗೆ ಹೊಂದಿ, ತನ್ನ ಜೀವನವನ್ನು ಸಾಗಿಸಬೇಕಾದರೆ ನಿಸರ್ಗ ಅತ್ಯಂತ ಅವಶ್ಯಕವಾಗಿದೆ. ಉತ್ತಮವಾದ ನಿಸರ್ಗ, ಪರಿಸರವಿದ್ದರೆ ಎಲ್ಲಾ ಜೀವರಾಶಿಗಳು ಸದೃಢವಾಗಿ, ದೀರ್ಘಕಾಲವಾಗಿ ಜೀವಿಸಲು ಸಾಧ್ಯವಾಗಿದೆ. ನಿಸರ್ಗದಲ್ಲಿ ಏನಾದರೂ ಏರುಪೇರಾದರೆ ಅದರಿಂದ ಎಲ್ಲಾ ಜೀವರಾಶಿಗಳಿಗೂ ತೊಂದರೆಯಿದ್ದು, ನಿಸರ್ಗವನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಉಪನ್ಯಾಸಕ, ಸಾಮಾಜಿಕ ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಮಹಾದೇವ ನಗರದಲ್ಲಿರುವ ‘ಸ್ವಾತಿ, ಶಿವಾ ವಿದ್ಯಾ ಮಂದಿರ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಜರುಗಿದ ‘ವಿಶ್ವ ವಾತಾವರಣ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭಾರತವು ನೈಸರ್ಗಿಕ ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲಗಳಿಂದ ಸಂಪತ್ಭರಿತ ರಾಷ್ಟ್ರವಾಗಿದೆ. ನಮ್ಮ ದೇಶದಲ್ಲಿ 45000 ಸಸ್ಯ ಪ್ರಬೇಧಗಳಲ್ಲಿ 15000 ಹೂ ಬಿಡುವ ಸಸ್ಯಗಳು, 1676 ಪಾಚಿ, 1940 ಕಲ್ಲು ಹೂಗಳು, 12480 ಅಣಬೆ ಸೇರಿದಂತೆ ಸಾಕಷ್ಟುಸಂಖ್ಯೆಯಲ್ಲಿ ಸಸ್ಯರಾಶಿ ಇದೆ. ಒಟ್ಟು 81000 ಪ್ರಾಣಿ ಪ್ರಬೇಧಗಳಲ್ಲಿ, 372 ಸಸ್ತನಿಗಳು, 1228 ಪಕ್ಷಿ ಸಂಕುಲ, 428 ಸರಿಸೃಪಗಳು, 204 ಉಭಯ ಜೀವಿಗಳು, 2546 ಮೀನು 57525 ಕೀಟಗಳು ಮತ್ತು ಅನೇಕ ಅಕಶೇರಕಗಳನ್ನು ಹೊಂದಿರುವ ಅತ್ಯಂತ ನೈಸರ್ಗಿಕ ಸಂಪತ್ಬರಿತ ರಾಷ್ಟ್ರ ನಮ್ಮದಾಗಿದೆ ಎಂದರು.
ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಮಾನವ ನಿಸರ್ಗದ ಮೇಲೆ ಸವಾರಿ ಮಾಡಲು ಹೊರಟಿದ್ದಾನೆ. ಇದರಿಂದ ಅನೇಕ ಸಸ್ಯ ಮತ್ತು ಪ್ರಾಣಿಗಳು ನಾಶಹೊಂದಿವೆ ಮತ್ತು ಇನ್ನೂ ಕೆಲವು ಅಳವಿನಂಚಿನಲ್ಲಿವೆ. ಅಧೀಕ ಪ್ರಮಾಣದ ಕಾರ್ಬನ ಡೈಆಕ್ಸೈಡ ವಾತಾವರಣೆಕ್ಕೆ ಸೇರಿ, ಜಾಗತೀಕ ತಾಪಮಾನ ಉಂಟಾಗುತ್ತಿದೆ. ಅರಣ್ಯಗಳು ನಾಶಹೊಂದಿತ್ತಿವೆ. ಹೀಗೆ ಅನೇಕ ಕಾರಣಗಳಿಂದ ಪರಿಸರವು ಅಸಮತೋಲನಾವಾಗುತ್ತಿದೆ. ಇದರಿಂದ ಸೂಕ್ತ ಕಾಲಕ್ಕೆ ಮಳೆ-ಬೆಳೆಯಾಗದೇ ರೈತರು ಸಂಕಷ್ಟಕ್ಕಿಡಾಗಿದ್ದಾರೆಂದು ನುಡಿದರು.
ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ ಮಾತನಾಡಿ, ನಮ್ಮ ಮನೆ ಸುತ್ತಮುತ್ತಲು ಗಿಡಮರಗಳನ್ನು ನೆಟ್ಟು ಪೋಷಿಸಬೇಕು. ಸಸ್ಯ ಮತ್ತು ಪ್ರಾಣಿ ಸಂಪತ್ತು ನಾಶಮಾಡಬಾರದು.ಪರಿಸರ ರಕ್ಷಣೆ ಅರಿವು ಪ್ರತಿಯೊಬ್ಬರಲ್ಲಿ ಮೂಡಬೇಕು. ಉತ್ತಮವಾದ ನಿಸರ್ಗ ಉಳಿದರೆ ಮಾತ್ರ ನಮ್ಮ ಉಳಿವು ಇದೆ ಎಂಬುದುನ್ನು ನಾವು ಮರೆಯಬಾರದು ಎಂದರು.
ಕಾರ್ಯಕ್ರದಮಲ್ಲಿ ಶಿವಯೋಗಪ್ಪ ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಸಿ.ಗಾರಂಪಳ್ಳಿ, ಶಿಕ್ಷಕರಾದ ಸ್ವಾತಿ ಆರ್.ಪವಾಡಶೆಟ್ಟಿ, ಪ್ರೀತಿ ಜೆ.ಬಿರಾದಾರ, ಸ್ವಾತಿ ಆರ್.ಪವಾಡಶೆಟ್ಟಿ, ಚಂದ್ರಲೇಖಾ ಪೂರ್ಮಕರ್, ಸಾವಿತ್ರಿ ಎನ್.ಪಾಟೀಲ, ಕಾಶಮ್ಮ ಎಸ್.ಚಿಂಚೋಳಿ, ವರ್ಷಾರಾಣಿ, ಈಶ್ವರಿ ಹಂಗರಗಿ, ರೋಹಿತ್ ಸಿ.ವೈ., ಖಮರುನ್ನಿಸ್ ಬೇಗಂ, ಶಿಲ್ಪಾ ಎಸ್.ಕೆ., ಮಾಯಾದೇವಿ ಲಕ್ಷ್ಮೀ ತಾಂಡೂರಕರ್, ಚಂದ್ರಲೇಖಾ ಪೂರ್ಮಕರ್, ಪ್ರೀತಿ ಜೆ.ಬಿರಾದಾರ, ಸಾವಿತ್ರಿ ಎನ್.ಪಾಟೀಲ, ಈಶ್ವರಿ ಹಂಗರಗಿ, ಮಾಯಾದೇವಿ, ವಿಜಯಲಕ್ಷ್ಮೀ ಸೇರಿದಂತೆ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.