ಕಲಬುರಗಿ,ಅ.9-ಹುಟ್ಟಿನೊಂದಿಗೆ ಬರುವ ಆಯುಷ್ಯವನ್ನು ದುಶ್ಚಟ, ದುರ್ವಿಚಾರಗಳಿಲ್ಲದೆ ಇದ್ದರೆ ಜೀವಿತದವರೆಗೆ ಆರೋಗ್ಯವಂತರಾಗಿ ಬಾಳಬಹುದು ಎಂದು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆಗಳ ಸಂಘಗಳ ಒಕ್ಕೂಟದ ಅಧ್ಯಕ್ಷ ವೀರಭದ್ರ ಸಿಂಪಿ ಅವರು ಹೇಳಿದರು.
ಅವರು ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಕಲಬುರಗಿ ಮಹಾನಗರ ಪಾಲಿಕೆಯ ನಿವೃತ್ತ ನೌಕರರ ಸಂಘದ ವತಿಯಿಂದ ಎಂ.ಬಿ.ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ 80 ವರ್ಷ ಮೇಲ್ಪಟ್ಟ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಚೇತನ ಸ್ಪೂರ್ತಿಯ ಜೀವನಕ್ಕಾಗಿಯೇ ಹಿರಿಯರಿಲ್ಲದ ಮನೆ ಅಲ್ಲ, ದೇವರಿಲ್ಲದ ಗುಡಿ ಅಲ್ಲ ಎಂದಿರುವರು. ಹಿರಿಯ ನಾಗರಿಕರನ್ನು ದೇವರ ಸಮನಾಗಿ ಭಕ್ತಿ ಗೌರವಗಳಿಂದ ಆದರಿಸಬೇಕೆಂದರು.
80 ವರ್ಷ ಮೇಲ್ಪಟ್ಟ ಸಂಘದ ಸದಸ್ಯರುಗಳಾದ ಅಬ್ದುಲ ಬಾಸೀದ್, ಪೀರಪ್ಪ ಸುಲ್ತಾನಪೂರ, ಕಮಲಾಕರ ಪಟವಾರಿ, ಮಾಣಿಕಪ್ಪ, ಮಹ್ಮದ ಉಸ್ಮಾನ, ಅಡಿವೆರಾವ, ಶ್ರೀಮಂತ ಕಾಂಬಳೆ, ಲಕ್ಷ್ಮೀಬಾಯಿ ಪಟ್ಟಣ, ಬಾಳಮ್ಮ ವಳಕೇರಿ ಅವರುಗಳನ್ನು ಫಲ, ತಾಂಬೂಲ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಪಂಚಾಚಾರ್ಯ ಜಗದ್ಗುರು ಸಂಸ್ಥಾನದ ಪ್ರಶಸ್ತಿ ಪಡೆದ ಶಿವಾಜಿ ಜಮಾದಾರ ಅವರನ್ನು, ಹಜ್ಜ್ ಯಾತ್ರೆಗೆ ಹೋಗಿ ಬಂದ ರಿಯಾಜ್ ಅಹ್ಮದ ಅವರನ್ನು ಸನ್ಮಾನಿಸಲಾಯಿತು.
ಕಲ್ಯಾಣಪ್ಪ ಬಿರಾದಾರ ಅವರು ಪ್ರಾರ್ಥಿಸಿದರು, ಸಿದ್ರಾಮ ಕರಣಿಕ ಮತ್ತು ಶಿವಾನಂದ ಯಳವಂತಗಿ ಕಾರ್ಯಕ್ರಮ ನಿರೂಪಿಸಿದರು, ಪದಾಧಿಕಾರಿಗಳು, ಹಿರಿಯ ಸದಸ್ಯರುಗಳಾದ ಎಚ್.ಶುಭಾಷ, ಶಲಫೂದ್ಧಿನ್, ಮಹಾದೇವಪ್ಪ ನಾಡೇಪಲ್ಲಿ, ಶಿವಶರಣಪ್ಪ ಮರಗೊಳ, ಶುಭಾಷ ದಿಗ್ಗಾಂವ, ಅಕ್ರಮ ಅಹ್ಮದ, ಶರಣಪ್ಪ ವಗದರ್ಗಿ, ಅಡವೇಪ್ಪ ಚಿದ್ರಿ, ಶಂಕರ ನಾಟಿಕಾರ,ಮಹಾದೇವಿ, ಸೈದಮ್ಮ ಸನ್ಮಾನಿತರ ಕುಟುಂಬದ ಸದಸ್ಯರು, ನಿವೃತ್ತ ನೌಕರರು ಉಪಸ್ಥಿತರಿದ್ದರು. ಶ್ರಿಕಾಂತ ಶೆಟ್ಟಿ ವಂದಿಸಿದರು.