
ಭಾಲ್ಕಿ:ಮಾ.17: ಸ್ವಯಂ ಉದ್ಯೋಗ ಕೈಗೊಳ್ಳುವ ಹಿನ್ನೆಲೆಯಲ್ಲಿ 10.50 ಲಕ್ಷ ರೂ ಸಹಾಯ ಧನದಲ್ಲಿ ತಾಲೂಕಿನ ಪರಿಶಿಷ್ಟ ಜಾತಿ ನಿರುದ್ಯೋಗಿ ಯುವಕರಿಗೆ ತಲಾ 70 ಸಾವಿರ ರೂ ವೆಚ್ಚದಲ್ಲಿ 15 ಮೋಟಾರ್ ಬೈಕ್ ಮತ್ತು ಕೀ ಹಸ್ತಾಂತರಿಸಲಾಗಿದೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಶಾಸಕರ ಗೃಹ ಕಚೇರಿ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಡಿ ಗುರುವಾರ ಪರಿಶಿಷ್ಟ ಜಾತಿಯ 15 ಮಂದಿಗೆ ಯುವಕರಿಗೆ ದ್ವಿಚಕ್ರದ ಮೋಟಾರ್ ಬೈಕ್ ಮತ್ತು ಕೀ ಹಸ್ತಾಂತರಿಸಿ ಅವರು ಮಾತನಾಡಿದರು.
ಸ್ವಾವಲಂಬನೆ ಬದುಕು ರೂಪಿಸಿಕೊಳ್ಳಲು ದ್ವಿಚಕ್ರದ ಬೈಕ್ ಸಹಕಾರಿಯಾಗಲಿವೆ. ಯುವಕರು ಬೈಕ್ಗಳ ಸದ್ಬಳಕೆ ಮಾಡಿಕೊಳ್ಳಬೇಕು. ಅನಾಹುತಗಳಿಗೆ ಅವಕಾಶ ನೀಡದೇ ಕಡ್ಡಾಯ ಸಂಚಾರ ನಿಯಮ ಪಾಲನೆ ಮತ್ತು ಹೆಲ್ಮೆಟ್ ಕಡ್ಡಾಯವಾಗಿ ಧರಿಸಿಯೇ ಬೈಕ್ ಒಡಿಸುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಗಳು, ಫಲಾನುಭವಿಗಳು ಹಾಜರಿದ್ದರು.
ಫಲಾನುಭವಿಗಳ ವಿವರ :
ಭೀಮಣ್ಣ ಶಂಕರ ಕುರುಬಖೇಳಗಿ, ಬಸವರಾಜ ಗಿರೇಪ್ಪ ಖಟಕ್ ಚಿಂಚೋಳಿ, ಸುನಿಲಕುಮಾರ ಮಾರುತಿರಾವ ಕಳಸದಾಳ, ಸಂತೋಷ ನಾಗನ್ನಾಥ ಭಾಲ್ಕಿ, ವಿಜಯಕುಮಾರ ಶರಣಪ್ಪ ಭಾಲ್ಕಿ, ಬಾಲಾಜಿ ರಾಜಕುಮಾರ ಸಾಯಿಗಾಂವ, ಧನರಾಜ ಧೋಂಡಿಬಾ ಕಾಸರತೂಗಾಂವ, ಶಿವಕುಮಾರ ಮಲ್ಲಪ್ಪ ಕಲವಾಡಿ, ರಮೇಶ ಬೀರಣ್ಣ ಬ್ಯಾಲಹಳ್ಳಿ, ಮಲ್ಲಿಕಾರ್ಜುನ ಮಾಣಿಕ ಭಾಲ್ಕಿ, ನವನಾಥ ನಾಮದೇವ ವಾಂಜರಖೇಡ್, ಭೋಲೇನಾಥ ಸುಧಾಕರ್ ಲಂಜವಾಡ, ಸೋಮನಾಥ ವಿಶ್ವನಾಥ ಲಂಜವಾಡ್, ಚಂದ್ರಕಾಂತ ಭೀಮರಾವ ಭಾಲ್ಕಿ ಮತ್ತು ಅಂಬರೀಷ ಬಾಬುರಾವ ಕಲವಾಡಿ ಅವರು ಶಾಸಕರಿಂದ ಬೈಕ್ ಮತ್ತು ಕೀ ಪಡೆದು ಕೊಂಡರು.