
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.27: ನಗರದ ಆರಾಧ್ಯ ದೇವತೆ ಕನಕ ದುರ್ಗಮ್ಮ ಸಿಡಿಬಂಡಿ ರಥೋತ್ಸವ ನಾಳೆ ಸಂಜೆ 5.30 ಕ್ಕೆ ನಡೆಯಲಿದೆ.
ಇಂದು ಸಂಜೆ ಅಲಂಕೃತ ಸಿಡಿಬಂಡಿ ರಥ ಕೌಲ್ ಬಜಾರ್ ಪ್ರದೇಶದಿಂದ ಗಾಣಿಗ ಸಮಾಜ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಿದೆ.
ನಾಳೆ ಸಂಜೆ ಮೂರು ಜೊತೆ ಎತ್ತುಗಳ ಮೂಲಕ ಸಿಡಿಬಂಡಿ ದೇವಸ್ಥಾನದ ಸುತ್ತ ಮೂರು ಸುತ್ತು ಪ್ರದಕ್ಷಿಣಿ ನಡೆಯಲಿದೆ.
ನಾಳೆ ಬೆಳಗಿನ ಜಾವದೊಳಗೆ ದುರ್ಗಮ್ಮಗೆ ವಿಶೇಷ ಅಭಿಷೇಕ ಮಾಡಿ, ಸ್ವರ್ಣ ಅಲಂಕಾರ ಮಾಡಲಿದೆ. ನಂತರ ದೇವಿಯ ದರ್ಶನಕ್ಕೆ ಭಕ್ತಾಧಿಗಳಿಗೆ ವ್ಯವಸ್ಥೆ ಮಾಡಿದೆ.
ಧರ್ಮ ದರ್ಶನದ ಜೊತೆ ಒಂದು ನೂರು ದೇಣಿಗೆ ನೀಡಿ ಕುಂಕುಮಾರ್ಚನೆ ಮಾಡಿಸುವವರಿಗೆ ವಿಶೇಷ ದರ್ಶನದ ವ್ಯವಸ್ಥೆ ಮಾಡಿದೆ.
ಪ್ರತಿ ವರ್ಷದಂತೆ ದಾಸೋಹ ವ್ಯವಸ್ಥೆಯನ್ನು ಇಡೀ ದಿನ ಸಚಿವ ಬಿ.ಶ್ರಿರಾಮುಲು ಅವರು ಹಮ್ಮಿಕೊಂಡಿದ್ದಾರೆ.
ದೇವಸ್ಥಾನಕ್ಕೆ ವಿಶೇಷ ವಿದ್ಯುತ್ ದೀಪ, ಹೂವಿನ ಅಲಂಕಾರ ಮಾಡಿದೆ. ದರ್ಶನ ಪಡೆಯಲು ಸಾಲಾಗಿ ನಿಲ್ಲುವವರಿಗೆ ನೆರಳು, ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನವಿದೆ.