ನಾಳೆ ಔರಾದನಲ್ಲಿ ಜಂಗಮ ವಿರಾಟ ಸಮಾವೇಶ ಯಶಸ್ವಿಗೆ ಹಣೆಗಾಂವ ಶ್ರೀ ಕರೆಸಮಾವೇಶದಲ್ಲಿ ಜಂಗಮ ಕಾಯಕ ಕುರುಹು ಪ್ರದರ್ಶನ

ಔರಾದ :ಫೆ.25: ನಾಳೆ ಫೇ.26 ರಂದು ಕರ್ನಾಟಕದ ಮುಕುಟಮಣಿ ತಾಲೂಕು ಔರಾದನ ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಜಂಗಮ ವಿರಾಟ ಸಮಾವೇಶ ಹಮ್ಮಿಕೊಳ್ಳಲಾಗಿದೆ, ಪ್ರಯುಕ್ತ ವೀರಶೈವ ಸಮಾಜ ಹಾಗೂ ಜಂಗಮ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾವೇಶ ಯಶಸ್ವಿಗೊಳಿಸಬೇಕೆಂದು ಪೂಜ್ಯ ಷ.ಬೃ ಶಂಕರಲಿಂಗ ಶಿವಾಚಾರ್ಯರು ತಿಳಿಸಿದ್ದಾರೆ.

ಪಟ್ಟಣದ ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ನಡೆಯುವ ಸಮಾವೇಶದಲ್ಲಿ ಶ್ರೀ ರಾಮ ಸೇನೆಯ ರಾಜ್ಯಾಧ್ಯಕ್ಷರಾದ ಆಂದೋಲ ಸಿದ್ದಲಿಂಗ ಮಹಾ ಸ್ವಾಮಿಗಳು ವಿರಾಟ ಸಂದೇಶ ನೀಡಲಿದ್ದಾರೆ, ಡೋಣಗಾಪೂರ ಶ್ರೀಮಠದ ಪೂಜ್ಯ ಷ.ಬೃ ರಾಜೇಶ್ವರ ಶಿವಾಚಾರ್ಯರು ಹಾಗೂ ತಾಲೂಕಿನ ಹೆಡಗಾಪೂರ ಮಠದ ಶಿವಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ, ಡೋಣಗಾಂವ ಮಠದ ಡಾ. ಶಂಭುಲಿಂಗ ಶಿವಾಚಾರ್ಯರು, ಠಾಣಾ ಕುಶನೂರ ಶ್ರೀ ಸಿದ್ದಲಿಂಗ ಸ್ವಾಮೀಜಿ, ಸೋನಾಳ ಚನ್ನವೀರ ಮಹಾಸ್ವಾಮಿಗಳು, ಮುಧೋಳ ಶಿವಲಿಂಗ ಶಿವಾಚಾರ್ಯರು, ಗುಡಪಳ್ಳಿ ಚಂದ್ರಶೇಖರ ಶಿವಾಚಾರ್ಯರು, ಹಾಗೂ ಕೌಳಾಸ ಬಸವಲಿಂಗ ಶಿವಾಚಾರ್ಯ ಸ್ವಾಮಿಗಳ ಸಮ್ಮುಖದಲ್ಲಿ ಜಂಗಮ ಬಾಂಧವರ ಶಕ್ತಿ ಪ್ರದರ್ಶನ ಜರುಗಲಿದೆ.

ಜಂಗಮ ಸಮಾಜವನ್ನು ಸಂಪೂರ್ಣವಾಗಿ ಸಂಸ್ಕಾರಿಕ, ವೈದಿಕ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಹಾಗೂ ರಾಜಕೀಯವಾಗಿ ಬಲಾಢ್ಯಗೊಳಿಸುವ ಹಾಗೂ ಮುಂಬರುವ ವಿಧಾನ ಸಭಾ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಸಮಾಜದ ಬೃಹತ್ ಶಕ್ತಿ ಪ್ರದರ್ಶನ ನಡೆಯಲಿದೆ ಪ್ರಯುಕ್ತ ಈ ಬೃಹತ್ ಸಮಾವೇಶಕ್ಕೆ ಜಂಗಮ ಬಾಂಧವರು ಕುಟುಂಬ ಸಮೇತ ಹೆಚ್ಚಿನ ಸಂಖ್ಯೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಬೇಕು ಎಂದು ತಿಳಿಸಿದ್ದಾರೆ.