ರಾಮನಗರ,ಜೂ.೫- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ವತಿಯಿಂದ ಕಸಾಪ ಸಂಸ್ಥಾಪಕರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತೋತ್ಸವ ಕಾರ್ಯಕ್ರಮವನ್ನು ನಗರದ ಕೆಂಪೇಗೌಡ ಸರ್ಕಲ್ನ ಎಬಿಸಿಡಿ ಡ್ಯಾನ್ಸ್ ಅಕಾಡಮಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶ್ರೀ ನಾಲ್ವಡಿ ಅವರಿಗೆ ಪುಷ್ಪ ನಮನ ಸಲ್ಲಿಸಿದ ಸಾಹಿತಿ ಮಲ್ಲೇಶ್ ಚನ್ನಮಾನಹಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅವಧಿಯಲ್ಲಿ ಮೈಸೂರು ನಾಡಿಗೆ ಜನಪಯೋಗಿ ಕಾರ್ಯಕ್ರಮದ ಮೂಲಕ ಉತ್ತಮ ಆಡಳಿತ ನೀಡುವುದರ ಜತೆಗೆ ಅಪಾರ ಕೊಡುಗೆಗಳನ್ನಾ ನೀಡಿದ ಅಪ್ರತಿಮ, ಅದ್ವೀತಿಯ ವ್ಯಕ್ತಿ. ಅವರ ಬದುಕು ಮತ್ತು ಸಾಧನೆಯನ್ನು ಒಡೆಯರ್ ಇಂದಿನ ಯುವ ಪೀಳಿಗೆಯವರಿಗೆ ಮಾದರಿಯಾಗಿದ್ದಾರೆ. ಆದರ್ಶ ದಾಯಕ ವ್ಯಕ್ತಿತ್ವ ಹೊಂದಿರುವ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಹಾನ್ ಮಾನವತಾವಾದಿ ವಿಶ್ವದಲ್ಲಿ ಒಂದನೇ ಮಹಾಯುದ್ಧದ ಸಿದ್ಧತೆಯ ಕಾಲಘಟ್ಟದಲ್ಲಿ ಮೈಸೂರು ರಾಜ್ಯವನ್ನು ಸುವರ್ಣ ಯುಗದ ವೃಷ್ಟಿಗೆ ತೆಗೆದುಕೊಂಡು ಹೋದ ಮಹಾನ್ ಪುರುಷ ಸಾಮಾಜಿಕ ಹರಿಕಾರ ಎಂದರು.
ಯುವ ಸಾಹಿತಿ ಚಂದನ್ ಪ್ರಕಾಶ್ ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತು ಮಾತನಾಡಿ, ಸರ್ವರಿಗೂ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಮೈಸೂರು ರಾಜ್ಯದ ಸಮಗ್ರ ಅಭಿವೃದ್ಧಿಗೆ ದುಡಿದ ಭಾಗ್ಯವಿಧಾತ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಮಾಜಿಕ ಕಾನೂನು ಹರಿಕಾರರಾಗಿದ್ದರು. ಅವರು ಕೈಗೊಂಡ ಕಾರ್ಯಗಳಲ್ಲಿ ಪ್ರಮುಖವಾಗಿ ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ ಕೃಷ್ಣರಾಜ ಸಾಗರ ಅಣೆಕಟ್ಟೆ ನಿರ್ಮಾಣ ಚಿತ್ರದುರ್ಗದ ವಾಣಿವಿಲಾಸ ಸಾಗರ ಅಥವಾ ಮಾರಿಕಣಿವೆ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ ನಾಲ್ವಡಿ ಅವರು ಕೈಗೊಂಡ ಸಾಮಾಜಿಕ ಕಾರ್ಯಕ್ರಮಗಳು ಅಂದರೆ ಎಲ್ಲರಿಗೂ ಉಚಿತ ಶಿಕ್ಷಣ ಬುಡಕಟ್ಟು ಜನಾಂಗದವರಿಗೆ ಶಿಕ್ಷಣದ ವ್ಯವಸ್ಥೆ, ಸ್ತ್ರೀಯರಿಗೆ ಮತದಾನದ ಹಕ್ಕು, ಜಲವಿದ್ಯುತ್ ಹೀಗೆ ಹತ್ತು ಹಲವಾರು ಸಾಮಾಜಿಕ ಕಾರ್ಯಗಳು ಅಚ್ಚಳಿಯದೆ ಇಂದಿಗೂ ಜನಸಮಾನ್ಯರ ಮನಸ್ಸಿನಲ್ಲಿ ಉಳಿದಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಟಿ.ದಿನೇಶ್ಬಿಳಿಗುಂಬ, ಕೋಶಾಧ್ಯಕ್ಷ ನಂಜುಂಡಯ್ಯ, ಸಂಚಾಲಕ ಬಿ.ಟಿ. ರಾಜೇಂದ್ರ ಬಿಳಿಗುಂಬ, ಕೂಟಗಲ್ ಹೋಬಳಿ ಅಧ್ಯಕ್ಷ ದೇವರಾಜು, ಕೈಲಂಚ ಹೋಬಳಿ ಗೌರವಕಾರ್ಯದರ್ಶಿ, ಚೇತನ್ ಗುನ್ನೂರು, ತುಂಬೇನಹಳ್ಳಿ ಕಿರಣ್ ರಾಜು, ಸದಸ್ಯ ಶಿವಮೂರ್ತಿ ಮತ್ತು ಎಬಿಸಿಡಿ ಡ್ಯಾನ್ಸ್ ಅಕಾಡಮಿ ಬಿಂದು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಯುವ ಸಾಹಿತಿ ಚಂದನ್ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.