ನಾಡಿದ್ದು ನಗರದ ಕಾಳಿಕಾ  ಕಮಠೇಶ್ವರ  ರಥೋತ್ಸವ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.04:  ನಗರದ ಕಾಳಮ್ಮ ಬೀದಿಯ  ಶ್ರೀಕಾಳಿಕಾ ಕಮಠೇಶ್ವರ ದೇವಸ್ಥಾನದ ಬ್ರಹ್ಮ ರಥೋತ್ಸವ ಹಾಗೂ ಮಡಿ ತೇರು ಏ 6 ರಂದು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ  ತಿಳಿಸಿದೆ.
ಇಂದು  ಮಧ್ಯಾಹ್ನ ಶ್ರೀಕಾಳಿಕಾ ಕಮಠೇಶ್ವರ ಕಲ್ಯಾಣೋತ್ಸವ . ನಂತರ  ಅನ್ನ ಸಂತರ್ಪಣೆ ಜರುಗಿತು.
ಏ.06ರಂದು ಬೆಳಿಗ್ಗೆ 8ಕ್ಕೆ ಶ್ರೀಕಾಳಿಕಾ ಕಮಠೇಶ್ವರ ಮಡಿತೇರು ಜರುಗಲಿದ್ದು, ಅದೇ ದಿನ ಸಂಜೆ 4.30ಕ್ಕೆ ಬ್ರಹ್ಮ ರಥೋತ್ಸವ ಜರುಗಲಿದೆ. ಭಕ್ತಾದಿಗಳೆಲ್ಲ ಇರಲ್ಲಿ   ಭಾಗಿಯಾಗಿ ಶ್ರೀಕಾಳಿಕಾ ಕಮಠೇಶ್ವರ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು  ಮನವಿ ಮಾಡಿದೆ.

One attachment • Scanned by Gmail